ಗುರುವಾರ, ಸೆಪ್ಟೆಂಬರ್ 17, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ ಕಾಲ ಕೆಡುವುದಿಲ್ಲ. ಕೆಡುವುದು ಜನರ ನಡತೆ ಮತ್ತು ಆಚಾರ-ವಿಚಾರ ಮಾತ್ರ.
--ಸ್ವಾಮಿ ವಿವೇಕಾನಂದ
ಪುರವಣಿ
ಕರ್ನಾಟಕ ದರ್ಶನ
ಕೃಷಿ
ಮೆಟ್ರೊ ಗುರುವಾರ
ಕ್ರೀಡಾ ಪುರವಣಿ
ಶಿಕ್ಷಣ ಪುರವಣಿ
ಚಿತ್ರ ವಿಮರ್ಶೆ
ಮೆಟ್ರೊ ಸೋಮವಾರ
ಭೂಮಿಕಾ
ತಂತ್ರಜ್ಞಾನ
ಯುವಜನ
ಆರೋಗ್ಯ
ವಿಮರ್ಶೆ
ಪುಸ್ತಕ ವಿಮರ್ಶೆ
ವಾಣಿಜ್ಯ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಸಾಪ್ತಾಹಿಕ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಜಿಲ್ಲೆ
ದಸರಾ ದರ್ಶನಕ್ಕೆ ಬಂದವರಿಗೆ ಇಸ್ಕಾನ್ ಊಟ!


ಮೈಸೂರು:
ಜೀವನದಲ್ಲಿ ಒಮ್ಮೆಯೂ ದಸರಾ ಉತ್ಸವವನ್ನು ನೋಡದೇ ಇರುವ ಗ್ರಾಮೀಣ ಮಂದಿಗೆ ನಾಡಹಬ್ಬ ದಸರಾ ಉತ್ಸವವನ್ನು ತೋರಿಸುವ ‘ದಸರಾ ದರ್ಶನ’ ಸೆ.20ರಿಂದ 25ರವರೆಗೆ ನಡೆಯಲಿದೆ.

ಕಳೆದ ಬಾರಿ ಕೇವಲ ಮೈಸೂರು ಜಿಲ್ಲೆಗೆ ಸೀಮಿತವಾಗಿದ್ದ ದಸರಾ ದರ್ಶನವನ್ನು ಈ ಬಾರಿ ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ಆಯಾ ತಾಲ್ಲೂಕುಗಳಲ್ಲಿ 50 ರೂಪಾಯಿ ನೀಡಿ ತಹಶೀಲ್ದಾರರಿಂದ ಪಾಸು ಪಡೆದುಕೊಂಡು ಬಂದವರಿಗೆ ದಸರಾ ಉತ್ಸವವನ್ನು ತೋರಿಸಲಾಗುವುದು ಎಂದು ದಸರಾ ದರ್ಶನ ಉಪ ಸಮಿತಿಯ ಮಲ್ಲಿಕಾರ್ಜುನ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗ್ರಾಮೀಣ ಪ್ರದೇಶದ ಜನರನ್ನು ಹೋಬಳಿ ಕೇಂದ್ರಗಳಿಂದ ಮೈಸೂರಿಗೆ ಕರೆತಂದು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಸೇರಿದಂತೆ ಪ್ರೇಕ್ಷಣೀಯ ಸ್ಥಳಗಳನ್ನು ಹಾಗೂ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತೋರಿಸಲಾಗುವುದು. ಮಧ್ಯಾಹ್ನ ಮತ್ತು ರಾತ್ರಿ ಅವರಿಗೆ ಊಟ ನೀಡಲಾಗುವುದು ಎಂದರು.

ದಸರಾ ದರ್ಶನದಲ್ಲಿ ಪಾಲ್ಗೊಂಡವರಿಗೆ ಊಟದ ವ್ಯವಸ್ಥೆಯನ್ನು ಇಸ್ಕಾನ್ ಮಾಡಿದ್ದು ಎರಡು ಊಟಕ್ಕೆ 42.50 ರೂಪಾಯಿ ಪಡೆದುಕೊಳ್ಳಲಿದೆ ಎಂದು ಅವರು ತಿಳಿಸಿದರು.

ದಸರಾ ದರ್ಶನಕ್ಕೆ ಶಾಲಾ ಮಕ್ಕಳು, ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಸೆ.20ರಿಂದ 22ರವರೆಗೆ ಹಾಸನ, ಮಂಡ್ಯ ಜಿಲ್ಲೆಯ 15 ತಾಲ್ಲೂಕುಗಳಿಂದ, 23ರಿಂದ 25ರವರೆಗೆ ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಯ 14 ತಾಲ್ಲೂಕುಗಳಿಂದ ಜನರನ್ನು ಕರೆದುಕೊಂಡು ಬರಲಾಗುವುದು.

ಸೆ. 20ರಿಂದ 22ರವರೆಗೆ ಹಾಸನ ಜಿಲ್ಲೆಯ 8 ತಾಲ್ಲೂಕುಗಳಿಂದ ಪ್ರತಿ ದಿನ 30 ಬಸ್‌ಗಳಲ್ಲಿ ದಿನಕ್ಕೆ 1650 ಜನರಂತೆ ಮೂರು ದಿನ ಕರೆತರಲಾಗುವುದು. ಅದೇ ರೀತಿ ಮಂಡ್ಯ ಜಿಲ್ಲೆಯ 7 ತಾಲ್ಲೂಕಿನ ಜನರನ್ನು ಪ್ರತಿ ದಿನ 27 ಬಸ್‌ಗಳಲ್ಲಿ ದಿನಕ್ಕೆ 1485 ಜನರಂತೆ 3 ದಿನಗಳ ಕಾಲ ಕರೆದುಕೊಂಡು ಬರಲಾಗುವುದು.

ಮೈಸೂರು ಜಿಲ್ಲೆಯ 7 ತಾಲ್ಲೂಕಿನ ಜನರನ್ನು 33 ಬಸ್‌ಗಳಲ್ಲಿ ಪ್ರತಿ ದಿನ 1815 ಜನರಂತೆ 3 ದಿನ ಕರೆದುಕೊಂಡು ಬರಲಾಗುವುದು. ಚಾಮರಾಜನಗರ ಜಿಲ್ಲೆಯ 4 ತಾಲ್ಲೂಕಿನ ಜನರನ್ನು 15 ಬಸ್‌ಗಳಲ್ಲಿ ದಿನಕ್ಕೆ 825 ಜನರಂತೆ ಕರೆದುಕೊಂಡು ಬರಲಾಗುವುದು. ಕೊಡಗು ಜಿಲ್ಲೆಯ 3 ತಾಲ್ಲೂಕುಗಳ ಜನರನ್ನು 15 ಬಸ್‌ಗಳಲ್ಲಿ ದಿನಕ್ಕೆ 825 ಜನರಂತೆ ಕರೆತಂದು ದಸರಾ ಕಾರ್ಯಕ್ರಮಗಳನ್ನು ತೋರಿಸಲಾಗುವುದು ಎಂದರು.

ಕೆರೆ ಮುಚ್ಚಲು ಯತ್ನ: ಸ್ಥಳೀಯರ ಆಕ್ರೋಶ
ಮೈಸೂರು:
ಸಿದ್ಧಾರ್ಥ ಬಡಾವಣೆಯಲ್ಲಿರುವ ಛತ್ರಿಕಟ್ಟೆ ಕೆರೆಯನ್ನು ಅನ್ನದಾನೇಶ್ವರ ಮಠದವರು ಮುಚ್ಚಿಸಲು ಹೋದಾಗ ಸ್ಥಳೀಯರು ಆಕ್ರೋಶಗೊಂಡು ಅಲ್ಲಿ ಕೆಲ ಕಾಲ ಉದ್ರಿಕ್ತ ವಾತಾವರಣ ಸೃಷ್ಟಿಯಾಗಿದ್ದ ಘಟನೆ ಬುಧವಾರ ರಾತ್ರಿ ನಡೆದಿದೆ.

ರಾತ್ರಿ ಜೆಸಿಬಿ ಯಂತ್ರವನ್ನು ಬಳಸಿ ಕೆರೆಯನ್ನು ಮುಚ್ಚಲು ಯತ್ನಿಸಿದಾಗ ಅಲ್ಲಿನ ಸ್ಥಳೀಯರು ಇದಕ್ಕೆ ಅಡ್ಡಿಪಡಿಸಿದ್ದರಿಂದ ಈ ಪ್ರದೇಶದಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿತ್ತು.

ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸಹಾಯಕ ಆಯುಕ್ತ ಮಹೇಶ್ ಜೆಸಿಬಿ ಯಂತ್ರವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಜರ್‌ಬಾದ್ ಪೊಲೀಸರ್ ಮಧ್ಯಸ್ತಿಕೆ ವಹಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಇತರ ಸುದ್ದಿಗಳು
ವಿದ್ಯುತ್ ತಂತಿ ತಗುಲಿ ನಾಲ್ವರ ಸಾವು
ಮೈಸೂರಿಗೆ ವಿಶೇಷ ಪ್ಯಾಕೇಜ್ ಪ್ರವಾಸ
ಕಡಲ ತೀರದ ನಾಗರಿಕರಿಗೆ ಶೀಘ್ರವೇ ಗುರುತು ಚೀಟಿ
ದೌರ್ಜನ್ಯ: ಇಂದು ‘ಗುಲ್ಬರ್ಗ ಬಂದ್’
ಚಿರತೆಗಳ ಚಲನವಲನದಿಂದ ಭಯಭೀತರಾಗಿರುವ ಜನತೆ
ಕನಕಪುರ:ನೆನೆಗುದಿಗೆ ಬಿದ್ದಿದ್ದ ಅಭಿವೃದ್ಧಿಗೆ ಚಾಲನೆ
ಭಾಗಮಂಡಲದಲ್ಲಿ 23 ಲಕ್ಷ ರೂ. ವೆಚ್ಚದಲ್ಲಿ ಅನ್ನಛತ್ರ
ಮೈತ್ರಿಕೂಟದ ಅಭ್ಯರ್ಥಿ ಬಿ.ಕೆ.ಚಂದ್ರುಗೆ ಗೆಲುವು
ಗ್ರಾಮೀಣ ದಸರಾಕ್ಕೆ ಐಂದ್ರಿತ ರೇ, ಗಣೇಶ
ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ
ಗ್ರಾಮಸ್ಥರಿಂದ ರಸ್ತೆ ತಡೆ
ದಲಿತರಿಗೆ ಅಧಿಕಾರ ಮರೀಚಿಕೆ: ದ್ವಾರಕನಾಥ್ ವಿಷಾದ
ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ ಕೋಣ ವಶ
ವಿವಿಧ ಸಂಘಟನೆಗಳಿಂದ ಸರಣಿ ಪ್ರತಿಭಟನೆ
ಇಲ್ಲದ ಪರವಾನಗಿ: ಹೋಟೆಲ್‌ಗೆ ಬೀಗ
ಅಹೋರಾತ್ರಿ ಮಹಿಳೆಯರ ಪ್ರತಿಭಟನೆ
ಕೊಡಗಿನ ಕಿತ್ತಳೆ ತಳಿ ವಿತರಿಸಲು ಆಗ್ರಹ
ಕೋಟೆ ಭೂಮಿಯಲ್ಲಿ ಕೇರಳಿಗರ ಕೃಷಿ
ತೆರೆದ ಕೊಳವೆ ಬಾವಿ ಅಪಾಯಕ್ಕೆ ಆಹ್ವಾನ
ಆನೆಗಳ ಹಾವಳಿ ತಡೆಗೆ ಆಗ್ರಹ: ರೈತರ ಮುತ್ತಿಗೆ
ದಸರಾ ದರ್ಶನಕ್ಕೆ ಬಂದವರಿಗೆ ಇಸ್ಕಾನ್ ಊಟ!
ಪೊಲೀಸರ ‘ದೌರ್ಜನ್ಯ’ ವಿರುದ್ಧ ಪ್ರತಿಭಟನೆ
ಮಳೆ ಕೊರತೆ: ಮತ್ತಷ್ಟು ಒಣಗಿದ ಕೆರೆ-ಕಟ್ಟೆ
ಜೀವ ಅಪಾಯದಿಂದ ಚಿರತೆ ಪಾರು
11 ಮಂದಿಗೆ ಗಾಯ, ವಾಹನ ಜಖಂ
ರಸ್ತೆ ಕೆಸರುಗದ್ದೆ: ಪಾದಚಾರಿಗಳ ಪರದಾಟ
ಸಾಗರ ಎಪಿಎಂಸಿ ಅಧ್ಯಕ್ಷರಾಗಿ ರುದ್ರಗೌಡ
‘ಖಾತ್ರಿ’ ಅವ್ಯವಹಾರ; ಗ್ರಾ.ಪಂ.ಗೆ ಮುತ್ತಿಗೆ
ಆತಂಕ ಸೃಷ್ಟಿಸಿದ ಕ್ವಾರಿ ದುರಂತ ಕಥೆ...
‘ಭೂಶಕ್ತಿ ವೃದ್ಧಿಸಲು ಕೃಷಿ ಉಪಕರಣ ಬಳಸಿ’
ಜನಪ್ರತಿನಿಧಿ ಬದಲಿಸುವ ವ್ಯವಸ್ಥೆ ಬರಲಿ
ಭತ್ತಕ್ಕೆ ರೋಗ: ಆತಂಕದಲ್ಲಿ ರೈತ ಸಮೂಹ
‘ಪ್ರಾಮಾಣಿಕತೆ ಇದ್ದರೆ ಪ್ರಶಸ್ತಿಗೆ ಬರವಿಲ್ಲ’
ಉತ್ತರೆ ಮಳೆ ಅಂಬಿನೋತ್ಸವ
ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸೂಚನೆ
ಸಾಧನೆಗೆ ಮತ್ತೊಂದು ಹೆಸರು ವಿಶ್ವೇಶ್ವರಯ್ಯ
ದಾವಣಗೆರೆ ಜಿಲ್ಲೆಗೆ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಸೌಲಭ್ಯ
ಕೊಳೆಗೇರಿಗೆ ನುಗ್ಗಿದ ನೀರು
ಅಡಿಕೆಗೆ ಕೊಳೆರೋಗ: ನಿಯಂತ್ರಣಕ್ಕೆ ಸಲಹೆ
ಕೆಲಸವಿಲ್ಲದೇ ಕಂಗಾಲಾದ ನೇಕಾರರಿಂದ ಧರಣಿ
ರೋಗ ನಿಯಂತ್ರಣಕ್ಕೆ ‘ಯೋಗ’ ರಾಮಬಾಣ
ಮುಖ್ಯಮಂತ್ರಿ ಪ್ರತಿಕೃತಿ ದಹನ
ಹೈ-ಕ ವಿಮೋಚನಾ ದಿನ ಬಿಡದ ವಿವಾದ
ಒರಿಸ್ಸಾದಲ್ಲಿ ಅಪಹೃತ ಗುಲ್ಬರ್ಗದಲ್ಲಿ ಪತ್ತೆ
ನಗರದಲ್ಲಿ ಗ್ರಾಮೀಣ ಅಂಚೆ ನೌಕರರ ಧರಣಿ
ಪೊಲೀಸ್ ದೌರ್ಜನ್ಯ ತಡೆಗೆ ಆಗ್ರಹ
ಶಿಕ್ಷಣ ಸಂಸ್ಥೆಗಳ ಜನಕ, ದಿಟ್ಟ ನಿಲುವಿನ ಅದಮಾರು ಶ್ರೀ
ಜನತಾದಳ(ಎಸ್) ತೆಕ್ಕೆಗೆ
4 ಮಣ್ಣುಮುಕ್ಕ ಹಾವು, 2 ಆಮೆ ವಶ; ಆರೋಪಿಗಳ ಬಂಧನ
‘ಪಟ್ಟಭದ್ರ ಹಿತಾಸಕ್ತಿಗಳಿದ ಪೀಠ ತ್ಯಾಗ’
ಶಾಲಾ ಕೊಠಡಿ ಶಿಥಿಲ ಬಯಲಿನಲ್ಲಿ ಪಾಠ
‘ಕಾನೂನು ವ್ಯವಸ್ಥೆ ಹದಗೆಡಲು ಸಚಿವರೆ ಕಾರಣ’
‘ಶರಣ, ಸಂತರ ಸಾಹಿತ್ಯ ಸನ್ಮಾರ್ಗಕ್ಕೆ ದಾರಿ’
ತುಂಗಾ ಮೇಲ್ದಂಡೆ ಸಂತ್ರಸ್ತರ ಗೋಳು...
ಮೊದಲು ರಂಗಭೂಮಿಗೆ ಬನ್ನಿ: ಉಮಾಶ್ರೀ ಕರೆ
ವಿದ್ಯುತ್ ಸ್ಪರ್ಶ: ತಾತ ವೆಾಮ್ಮಗ ಸಾವು
ಯಶವಂತಪುರ- ಅಹ್ಮದಾಬಾದ್ ವಿಶೇಷ ರೈಲು
ಗುತ್ತಿಗೆ ವೈದ್ಯರ ನೇಮಕಕ್ಕೆ ಸೂಚನೆ
‘ಸ್ಫರ್ಧಾ ಮನೋಭಾವ ಬೆಳೆಸಿಕೊಳ್ಳಿ’
ಮಹಿಳಾ ಕಾನೂನು ಜಾಗೃತಿಗೆ ಸಲಹೆ
‘ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಿ’
‘ಶಿಕ್ಷಣದಲ್ಲಿ ವ್ಯಕ್ತಿತ್ವ ಚಿಂತನೆಗೆ ಆದ್ಯತೆ ಅಗತ್ಯ’
ತಾಲ್ಲೂಕು ಕಚೇರಿಗೆ ಸಿಐಟಿಯು ಮುತ್ತಿಗೆ
ಗೋ ಹತ್ಯೆ ಸಂಪೂರ್ಣ ನಿಷೇಧಕ್ಕೆ ಆಗ್ರಹ
ಜಾನಪದ ಕಲೆಗಳ ಉಳಿವಿಗೆ ಪ್ರೋತ್ಸಾಹ ಅಗತ್ಯ
ಅಭಿವೃದ್ಧಿ ಬಗ್ಗೆ ನಿರ್ಲಕ್ಷ ವಿರೋಧಿಸಿ ಇಂದು ಪ್ರತಿಭಟನೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618