ಶುಕ್ರವಾರ, ಸೆಪ್ಟೆಂಬರ್ 25, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನಮ್ಮ ಜೀವದ ಬಗ್ಗೆ ನಮಗೆ ಪ್ರೀತಿ ಇರುವಂತೆ, ಇತರ ಪ್ರಾಣಿಗಳಿಗೂ ಅವುಗಳ ಜೀವದ ಬಗ್ಗೆ ಪ್ರೀತಿ ಇರುತ್ತದೆ. ಇದನ್ನು ತಿಳಿದವರು ಎಲ್ಲಾ ಪ್ರಾಣಿಗಳನ್ನೂ ಪ್ರೀತಿಸುತ್ತಾರೆ .
-- ಹಿತೋಪದೇಶ
ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಕೃಷಿ
ಮೆಟ್ರೊ ಗುರುವಾರ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಮೆಟ್ರೊ ಶನಿವಾರ
ಕರ್ನಾಟಕ ದರ್ಶನ
ತಂತ್ರಜ್ಞಾನ
ಯುವಜನ
ಶಿಕ್ಷಣ ಪುರವಣಿ
ಆರೋಗ್ಯ
ವಾಣಿಜ್ಯ ಪುರವಣಿ
ಮೆಟ್ರೊ ಮಂಗಳವಾರ
ಕ್ರೀಡಾ ಪುರವಣಿ
ಭೂಮಿಕಾ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಜಿಲ್ಲೆ
ನೆನಪಿಗೆ ಬಾರದ ಜನನ ಮಂಟಪ
ಪ್ರಜಾವಾಣಿ ವಾರ್ತೆ ವಿಶೇಷ ವರದಿ
ಚಾಮರಾಜನಗರಕ್ಕೂ ಮೈಸೂರು ರಾಜರಿಗೂ ಅವಿನಾಭಾವ ಸಂಬಂಧವಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ತಂದೆ ಚಾಮರಾಜೇಂದ್ರ ಒಡೆಯರ್ 1774 ಮಾರ್ಚ್ 1ರಲ್ಲಿ ಚಾಮರಾಜನಗರದಲ್ಲಿ ಜನಿಸಿದರು.

ಚಾಮರಾಜನಗರದಲ್ಲಿ ಇರುವ ಚಾಮರಾಜೇಂದ್ರ ಒಡೆಯರ್ ಹುಟ್ಟಿದ ಸ್ಥಳ ಜನನ ಮಂಟಪದ ಅವಸ್ಥೆ.

ಚಾಮರಾಜನಗರ: ಮೈಸೂರು ಜಿಲ್ಲೆಯಿಂದ ವಿಭಜನೆಗೊಂಡ ದಶಕಗಳ ನಂತರ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಗ್ರಾಮೀಣ ದಸರೆಯನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಉತ್ಸಾಹದ ಭರದಲ್ಲಿ ದಸರೆಗೆ ಕಾರಣಕರ್ತರಾದ ರಾಜಪರಂಪರೆಯನ್ನು ಸ್ಮರಿಸುವ ಗೋಜಿಗೆ ಯಾರು ಹೋಗದೆ ಪರಸ್ಪರ ಕೆಸರು ಎರಚಿಕೊಳ್ಳುವತ್ತ ಗಮನಹರಿಸಿದ್ದಾರೆ.

ಗ್ರಾಮೀಣ ದಸರೆಗೆ ಸರ್ಕಾರ ತರಾತುರಿಯಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಬಿಡುಗಡೆ ಮಾಡಿದೆ. ಪ್ರತಿಯೊಂದು ತಾಲ್ಲೂಕು ಕೇಂದ್ರದಲ್ಲೂ ಒಂದು ದಿನ ಸ್ತಬ್ದ ಚಿತ್ರಗಳು, ಜನಪದ ಕಲಾ ತಂಡಗಳ ಮರೆವಣಿಗೆ ಮಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಕೈತೊಳೆದು ಕೊಳ್ಳಲಾಗುತ್ತಿದೆ.

click here
ಬೇರೆ ತಾಲ್ಲೂಕುಗಳಲ್ಲಿ ನಡೆದ ಸಮಾರಂಭದಲ್ಲಿ ರಾಜ ಪರಂಪರೆಯನ್ನು ನೆನಪು ಮಾಡಿಕೊಳ್ಳದೆ ಹೋದರೂ ಬುಧವಾರ ಚಾಮರಾಜನಗರದಲ್ಲಿ ನಡೆದ ಕಾರ್ಯಕ್ರಮದಲ್ಲಾದರೂ ಸ್ಮರಣೆ ಮಾಡಿಕೊಳ್ಳಬಹುದಾಗಿತ್ತು. ಕಾರ್ಯಕ್ರಮವನ್ನು ಏರ್ಪಡಿಸಿದ್ದ ವೇದಿಕೆಯಿಂದ ಮಾರು ದೂರದಲ್ಲಿ ಜನನ ಮಂಟಪವಿತ್ತು. ಆದರೂ ಅತ್ತ ಯಾರು ತಿರುಗಿಯೂ ನೋಡಿಲ್ಲ.

ಗ್ರಾಮೀಣ ದಸರಾ ಎಂದು ಆ ಜಾಗವನ್ನು ಸ್ವಚ್ಛಗೊಳಿಸಿಲ್ಲ. ಜನನ ಮಂಟಪದ ಒಳಗೆ ನೋಡಲು ಹೋದರೆ ವಾಕರಿಕೆ ಬರುವಷ್ಟು ಅಧ್ವಾನವಾಗಿದೆ.

ಚಾಮರಾಜನಗರಕ್ಕೂ ಮೈಸೂರು ರಾಜರಿಗೂ ಅವಿನಾಭಾವ ಸಂಬಂಧವಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ತಂದೆ ಚಾಮರಾಜೇಂದ್ರ ಒಡೆಯರ್ 1774 ಮಾರ್ಚ್ 1ರಲ್ಲಿ ಚಾಮರಾಜನಗರದಲ್ಲಿ ಜನಿಸಿದರು. ತಂದೆಯವರ ಜನ್ಮಸ್ಥಳದ ನೆನಪಿಗಾಗಿ ‘ಅರಿಕುಠಾರ’ ಎಂದು ಇದ್ದ ಊರನ್ನು ಚಾಮರಾಜನಗರ ಎಂದು ನಾಮಕರಣ ಮಾಡಿ, ಚಾಮರಾಜೇಶ್ವರ ದೇವಾಲಯವನ್ನು ನಿರ್ಮಿಸಿದರು ಮುಮ್ಮಡಿ ಕೃಷ್ಣರಾಜ ಒಡೆಯರ್.

ಚಾಮರಾಜೇಂದ್ರ ಒಡೆಯರ್ ಹುಟ್ಟಿದ ಸ್ಥಳ ಜನನ ಮಂಟಪ ಈಗಲೂ ಖಾಸಗಿ ಬಸ್‌ಗಳ ಹಳೆಯ ನಿಲ್ದಾಣದ ಹತ್ತಿರ ಇದೆ. ಆದರೆ ಯಾರೂ ಗಮನಿಸದೆ ಶಿಥಿಲಾವಸ್ಥೆಯಲ್ಲಿ ಇದೆ. ಚಾಮರಾಜನಗರ ಮೈಸೂರಿಗೆ ಸೇರಿದ್ದ ಸಮಯದಲ್ಲಿ ಪುರಾತತ್ವ ಇಲಾಖೆಯವರು ಇಲ್ಲಿ ಒಂದು ಬೋರ್ಡ್ ನೆಟ್ಟಿದ್ದರು. ಆದರೆ ಈಗ ಅದೂ ಇಲ್ಲ. ನಗರ ನೋಡಲು ಬರುವ ಹೊಸಬರಿಗೆ ಇದು ಯಾವ ಕಟ್ಟಡ ಎಂದು ತಿಳಿಯುವುದಕ್ಕೆ ಮಾಹಿತಿಯೂ ಇಲ್ಲ.

ನವರಾತ್ರಿ ಉತ್ಸವದ ಸಮಯದಲ್ಲಿ ಚಾಮರಾಜೇಶ್ವರ ದೇವಸ್ಥಾನದಲ್ಲಿ ಒಂಭತ್ತು ದಿನ ನಡೆಯುತ್ತಿದ್ದ ಪೂಜೆ, ಉತ್ಸವಗಳು ಜನನ ಮಂಟಪಕ್ಕೂ ಬಂದು ಅಲ್ಲಿಯೂ ಪೂಜೆ ಸಲ್ಲಿಸಿ ಮತ್ತೆ ದೇವಸ್ಥಾನಕ್ಕೆ ಹೋಗುತ್ತಿದ್ದವು, ರಥೋತ್ಸವದ ಸಮಯದಲ್ಲಿಯೂ ಸಹ ಜನನ ಮಂಟಪದ ಹತ್ತಿರಕ್ಕೆ ರಥ ಬಂದಾಗ ಅದನ್ನು ಸ್ವಲ್ಪ ಹೊತ್ತು ನಿಲ್ಲಿಸಿ, ಅರ್ಚಕರು ಜನನ ಮಂಟಪಕ್ಕೆ ಹೋಗಿ ಪೂಜೆ ಸಲ್ಲಿಸಿ ಬರುತ್ತಿದ್ದರು. ಈಗ ಈ ಸಂಪ್ರದಾಯಗಳು ಮರತೇ ಹೋಗಿದೆ ಎಂದು ಜಿಲ್ಲಾ ಜನಾಂದೋಲನ ಹೋರಾಟ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಅವರು ಹಳೆಯ ಘಟನಾವಳಿಯನ್ನು ಸ್ಮರಿಸುತ್ತಾರೆ.

ಗ್ರಾಮೀಣ ದಸರೆಗೆ ಲಕ್ಷ-ಲಕ್ಷ ಬಿಡುಗಡೆ ಮಾಡಿದೆ. ಈ ಹಣದಲ್ಲಿಯೇ ಜನನ ಮಂಟಪವನ್ನು ಸ್ವಚ್ಛಗೊಳಿಸಿ, ಒಳಗೆ ಇರುವ ಪಾರಂಪರಿಕ ಚಿತ್ರಗಳನ್ನು ಪುನರುಜ್ಜೀವನಗೊಳಿಸಿ, ಮಂಟಪದ ಹತ್ತಿರ ಗ್ರಾಮೀಣ ದಸರೆಗೆ ಸಾಂಕೇತಿಕವಾಗಿ ಚಾಲನೆ ನೀಡಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತು.

ಆದರೆ ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಇದರತ್ತ ಗಮನವನ್ನು ನೀಡದೆ ಪ್ರತಿಷ್ಠೆ ಮತ್ತು ಬಹಿಷ್ಕಾರದ ಜೊತೆ ಸಂಚಾರ ಮಾಡುತ್ತಿದ್ದಾರೆ ಎಂದು ಅವರು ಹೇಳಿದ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆ ಇರಲಿಲ್ಲ.          

ಇತರ ಸುದ್ದಿಗಳು
ನೆನಪಿಗೆ ಬಾರದ ಜನನ ಮಂಟಪ
ಸರ್ವಧರ್ಮೀಯರನ್ನು ಮೇಳೈಸಿದ ‘ಸೌಹಾರ್ದ ದಸರಾ’
ಎಂಜಿನಿಯರ್ ಸೇವೆ ಗುರುತಿಸಲು ಕರೆ
ಹಿರಿಯೂರು, ಹೊಳಲ್ಕೆರೆ: ಭಾರೀ ಹಾನಿ
ಅರ್ಹರಿಗೆ ಸಿಕ್ಕೀತೇ ಸರ್ಕಾರದ ಸೂರು?
ಸಂಕಷ್ಟದಲ್ಲಿ ವಿದ್ಯಾರ್ಥಿಗಳು
ಕುಗ್ರಾಮಗಳಿಗೆ 24 ಗಂಟೆ ವಿದ್ಯುತ್
ಮೆಸ್ಕಾಂನಿಂದ ಫಸಲಿಗೆ ಬಂದ ಬಾಳೆಗಿಡ ಧ್ವಂಸ
‘ಧಾರ್ಮಿಕ ಅಸಹನೆ ಅಭಿವೃದ್ಧಿಗೆ ಅಡ್ಡಿ’
‘ತ್ಯಾಜ್ಯ’ವಾಯಿತೇ ಘನತ್ಯಾಜ್ಯ ಸಂಸ್ಕರಣಾ ಘಟಕ
‘ಸಾರಂಗ್’.. ಇದು ಸಮುದಾಯ ಬಾನುಲಿ!
ಕೊಲ್ಲೂರು: ನೂಕುನುಗ್ಗಲು, ಸೀರೆ ಏಲಂ
ಪೊಲೀಸರಿಂದ ಕ್ರೈಸ್ತರಿಗೆ ಸಹಾಯ:ರೆಡ್ಡಿವಾದ
ಕೆಸರುಗದ್ದೆಯಾಗಿರುವ ಕುಂಪಲದ ರಸ್ತೆ!
‘ಪಕ್ಷಿಕಾಶಿ’ಯಾಗುತ್ತಿರುವ ‘ವಿದ್ಯಾಕಾಶಿ’
1083 ದೇವದಾಸಿಯರಿಗೆ ಮಾಸಾಶನ
‘ಉಪ್ಪಿಟ್ಟ ತಿನ್ನಾಕ ಸಭೆಗೆ ಬರಬೇಕೇನ್ರಿ’
ವಿಜಾಪುರ ಅವ್ಯವಸ್ಥೆ ಕಂಡು ನಾಚಿಕೆ ಆಗುತ್ತಿದೆ: ಸಿಎಂ ಕಳವಳ
‘ಮುರುಘಾಮಠಕ್ಕೆ ಸ್ವಾಮಿಗಳನ್ನು ಸೇರಿಸುವುದಿಲ್ಲ’
‘ಧರ್ಮ’ ಸಮನ್ವಯತೆ ದ್ಯೋತಕ
‘ಚಲನಚಿತ್ರಗಳು ಯುವಕರ ದಾರಿ ತಪ್ಪಿಸುತ್ತಿವೆ’
ಅಭಿವೃದ್ಧಿಗೆ 7 ಕೋಟಿ ಕ್ರಿಯಾಯೋಜನೆ
ಗಾಂಜಾವಾಲ ಮೋಡಿ; ಕನ್ನಡ ಗೀತೆಗಳ ಜೋಡಿ
ಐತಿಹಾಸಿಕ ಮಡಿಕೇರಿ ದಸರಾ ಉತ್ಸವಕ್ಕೆ ಬಿಗಿ ಬಂದೋಬಸ್ತ್
ಶಾಸಕರಿಂದ ಅಧಿಕಾರಿಗಳ ತರಾಟೆ
‘ಭಾಷಾ ನೀತಿ ಸಮರ್ಥನೆಗೆ ಸರ್ಕಾರ ಸಿದ್ಧ’
ಮಳೆಗೆ ಕೊಂಚ ವಿರಾಮ: ಸಹಜ ಸ್ಥಿತಿಯತ್ತ ಜನಜೀವನ
ಕೆಆರ್‌ಎಸ್‌ಗೆ ಬಿಗಿ ಬಂದೋಬಸ್ತ್
‘ಹೈ-ಕ ಅಭಿವೃದ್ಧಿಗೆ ಕೃಷಿ ಆಧಾರಿತ ಯೋಜನೆ’
ಒಳಚರಂಡಿ ಕೆಲಸ ಶೀಘ್ರ ಪುನರಾರಂಭ
‘ಸಿದ್ದಗಂಗಾ ಶ್ರೀಗಳ ಸೇವೆ ಅನುಪಮ’
ಕಾಲೇಜುಗಳಿಗೆ ಸೌಲಭ್ಯಕ್ಕೆ ಆಗ್ರಹ
ವಾಹನ ಸಂಚಾರ ನಿಯಂತ್ರಣಕ್ಕೆ ಕ್ರಮ
ದುರುದ್ದೇಶದ ಕ್ರಮ ಬೇಡ: ಉಗ್ರಪ್ಪ
’ಗಾಂಧಿ ತತ್ವಗಳ ವಿಸ್ಮೃತಿಯಿಂದ ದುಃಸ್ಥಿತಿ’
ತಾಲ್ಲೂಕು ಕೇಂದ್ರಕ್ಕೆ ಆಗ್ರಹಿಸಿ ಕವಿತಾಳ ಬಂದ್
ವಿದ್ಯಾರ್ಥಿ ವಿರೋಧಿ ನೀತಿಗೆ ಖಂಡನೆ
ಹಾಲು ಒಕ್ಕೂಟ: ರೆಡ್ಡಿ ಸಲಹೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618