|
‘ಲವ್ ಜಿಹಾದ್ನಿಂದ ರಾಷ್ಟ್ರ ರಕ್ಷಿಸಿ’
|
ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರು ಅಪಹರಿಸಿ, ಇಲ್ಲವೇ ಪ್ರೇಮದ ನಾಟಕವಾಡಿ ಮದುವೆಯಾಗಿ ಬಳಿಕ ‘ಲವ್ ಜಿಹಾದ್’ ಹೆಸರಲ್ಲಿ ಅವರನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ದೇಶದಲ್ಲಿ ಹೆಚ್ಚುತ್ತಿದೆ ಎಂದು ಆರೋಪಿಸಿದ ಪ್ರಮೋದ್ ಮುತಾಲಿಕ್, ಈ ಬಗ್ಗೆ ರಾಷ್ಟ್ರೀಯ ಜಾಗೃತಿ ಮೂಡಿಸಬೇಕು ಎಂದು ಆಗ್ರಹಿಸಿದರು.
ಮದುವೆ ಆಸೆ ಹುಟ್ಟುಹಾಕಿ ಬಳಿಕ ಹಿಂದೂ ಹುಡುಗಿಯರನ್ನು ವಿದೇಶಕ್ಕೆ ಮಾರಲಾಗುತ್ತಿದೆ. ಡ್ರಗ್ಸ್ ಪೂರೈಕೆ, ಕೋಟಾನೋಟು ಚಲಾವಣೆ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಕಳೆದ ವರ್ಷ ಕೇರಳದಲ್ಲಿ 920 ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರು ಮದುವೆಯಾಗಿದ್ದಾರೆ. ಅವರಲ್ಲಿ ಇಬ್ಬರು ಯುವತಿಯರು ಪೊಲೀಸರಿಗೆ ಸ್ಫೋಟಕ ಮಾಹಿತಿಗಳನ್ನು ನೀಡಿದ್ದಾರೆ. ‘ವರ್ಷವಿಡೀ ನಮಗೆ ಭಾರತದ ಮೇಲೆ ದಾಳಿ ಮಾಡುವ ತಂತ್ರಗಳ ಬಗ್ಗೆ ಸಿಡಿ ತೋರಿಸುವುದು, ಬಾಂಬ್ ತಯಾರಿ, ಹಿಂದೂಗಳ ಮೇಲೆ ದಾಳಿ ಮಾಡುವ ಬಗ್ಗೆ ತರಬೇತಿ ನೀಡುತ್ತಿದ್ದರು’ ಎಂದು ಆ ಯುವತಿಯರು ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಕೂಡಲೇ ರಾಷ್ಟ್ರೀಯ ಜಾಗೃತಿ ಮೂಡಿಸಬೇಕಿದೆ ಎಂದು ಮುತಾಲಿಕ್ ಹೇಳಿದರು. |
ಉಡುಪಿ: ಈಗಾಗಲೇ ದತ್ತಮಾಲಾಧಾರಣೆ ಆರಂಭವಾಗಿದ್ದು, ಅ. 4ರಂದು ದತ್ತಪೀಠದಲ್ಲಿ 10 ಸಾವಿರ ಭಕ್ತರು ಸೇರಿ ಬೃಹತ್ ಸಮಾರೋಪ ಕೈಗೊಳ್ಳುತ್ತಿರುವುದಾಗಿ ಶ್ರೀರಾಮ ಸೇನೆ ರಾಷ್ಟ್ರೀಯ ಮುಖಂಡ ಪ್ರಮೋದ್ ಮುತಾಲಿಕ್ ಇಲ್ಲಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10 ವರ್ಷಗಳಿಂದ ದತ್ತಪೀಠ ವಿಚಾರದಲ್ಲಿ ಹೋರಾಟ ನಡೆಸುತ್ತಿದ್ದೇವೆ. ಶೋಭಾಯಾತ್ರೆ, ಪಾದುಕೆ ಪೂಜೆ ಮೊದಲಾದ ಧಾರ್ಮಿಕ ವಿಧಿ ವಿಧಾನಗಳಿಗೆ ದತ್ತಪೀಠದಲ್ಲಿ ಅನುವು ಮಾಡಿಕೊಡಬೇಕು ಎಂದು ಜಿಲ್ಲಾಡಳಿತವನ್ನು ಕೋರಿರುವುದಾಗಿ ತಿಳಿಸಿದರು.
ದತ್ತಪೀಠದ ಛಾವಣಿ ದುರಸ್ತಿ ಕಾರ್ಯವನ್ನು ಸರ್ಕಾರ ಕೈಗೊಂಡಿರುವುದು ಸ್ವಾಗತಾರ್ಹ. ಒಂದು ವೇಳೆ ಅಲ್ಲಿ ಅಲ್ಪ ಬದಲಾವಣೆ ಮಾಡಿದರೂ ತಪ್ಪೇನಿಲ್ಲ. ಏಕೆಂದರೆ ಅದು ಬಾಬಾ ಬುಡನ್ಗಿರಿ ಅಲ್ಲ, ದತ್ತಪೀಠ. ಅದಕ್ಕೆ ಸ್ಪಷ್ಟ ಆಧಾರವಿದೆ. ‘ಇನಾಮ್ ದತ್ತಾತ್ರೇಯಪೀಠ’ ಎಂದೇ ದಾಖಲೆಯಲ್ಲಿ ಇದೆಯೇ ಹೊರತು ‘ಬಾಬಾಬುಡನ್ಗಿರಿ’ ಎಂದು ಎಲ್ಲಿಯೂ ಹೆಸರಿಲ್ಲ ಎಂದು ವಾದಿಸಿದರು.
ಸೌಹಾರ್ದ ಪರಿಹಾರ ಅಗತ್ಯ: ಸರ್ಕಾರ ದತ್ತಪೀಠ ವಿಚಾರವನ್ನು ರಾಜಕೀಯಗೊಳಿಬಾರದು. ಮಾತುಕತೆ ಮೂಲಕ ಶಾಶ್ವತ ಪರಿಹಾರದತ್ತ ಮನಸ್ಸು ಮಾಡಬೇಕು. ದತ್ತಪೀಠದ ಬಗ್ಗೆ ವಿರೋಧ ಮಾಡುವವರು ಮುಸ್ಲಿಂ ಮುಖಂಡರ ಜತೆಗೆ ಮಾತುಕತೆ ನಡೆಸಿ ಶಾಶ್ವತ ಪರಿಹಾರ ಕಂಡು ಹಿಡಿಯಲಿ. ದತ್ತಪೀಠ ಹೋರಾಟದಿಂದ ಬಿಜೆಪಿ ಸರ್ಕಾರಕ್ಕೆ ಸಾಕಷ್ಟು ಲಾಭವಾಗಿದೆ. ಅದರಿಂದಾಗಿ ಹಲವು ಶಾಸಕರನ್ನು ಸಂಸದರನ್ನು ಗೆದ್ದಿದೆ. ಈಗಲಾದರೂ ಸೌಹಾರ್ದ ರೀತಿ ಸಮಸ್ಯೆ ಬಗೆಹರಿಸಲಿ ಎಂದರು.
ದೆಹಲಿ ಸಭೆ ಪ್ರಮುಖ ನಿರ್ಣಯ: ಸೆ. 19 ಮತ್ತು 20ರಂದು ಶ್ರೀರಾಮ ಸೇನೆ ಹಾಗೂ ಅದರ ಸಮಾನ ಮನಸ್ಕ ಸಂಘಟನೆಗಳು ಸೇರಿದಂತೆ 12 ರಾಜ್ಯಗಳಿಂದ 18 ಸಂಘ ಸಂಸ್ಥೆಗಳು ದೆಹಲಿಯಲ್ಲಿ ಎರಡು ದಿನ ಸಭೆ ಸೇರಿ ಸುಧೀರ್ಘ ಚರ್ಚೆ ನಡೆಸಿ ‘ಲವ್ ಜಿಹಾದ್’ಗೆ ವಿರೋಧ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಂಡಿವೆ.
ಮುಸ್ಲಿಮರನ್ನು ರಾಷ್ಟ್ರೀಯ ಮುಖ್ಯವಾಹಿನಿಯಿಂದ ಪ್ರತ್ಯೇಕಿಸುವಂತೆ ‘ಸಾಚಾರ್ ಸಮಿತಿ’ ವರದಿ ನೀಡಿದೆ. ಅದನ್ನು ಕೂಡಲೇ ರದ್ದು ಮಾಡಬೇಕು. ಅಲ್ಪಸಂಖ್ಯಾತರಿಗೆ ಸರ್ಕಾರ ಈಗ ನೀಡುತ್ತಿರುವ ಸವಲತ್ತುಗಳನ್ನೇ ಮುಂದುವರಿಸಬೇಕು ಎಂದರು.
ಆಸ್ಟ್ರೇಲಿಯ, ಶ್ರೀಲಂಕಾ, ಮಲೇಷಿಯ, ಬಾಂಗ್ಲಾದೇಶ, ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಭಾರತೀಯರ ಮೇಲೆ ಹಲ್ಲೆ ನಡೆಯುತ್ತಲೇ ಇದೆ. ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ದುರ್ಗಾಸೇನೆ ಮುಖಂಡರಾದ ಸವಿತಾ ರಂಗನಾಥ್, ರಾಜ್ಯಸಹ ಸಂಚಾಲಕ ಜಿತೇಶ್ ಕುಮಾರ್, ಸೇನೆಯ ಜಿಲ್ಲಾ ಸಂಚಾಲಕ ರಾಜೇಶ್ ಎರ್ಮಾಳ್, ಮಧುಕರ ಮುದ್ರಾಡಿ ಇದ್ದರು.