ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಃಪುರದಲಿ ಹೊಸ ಪ್ರೇಮಗೀತೆ

Last Updated 16 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಪ್ರೇಮ ಸಾಹಸಗಳ ಹೊಸ ಕಥನವಾದ ‘ಅಂತಃಪುರ’ ಧಾರಾವಾಹಿ ಸುವರ್ಣ ವಾಹಿನಿಯಲ್ಲಿ ಏಪ್ರಿಲ್‌ 20ರ ಸೋಮವಾರದಿಂದ ಆರಂಭವಾಗುತ್ತಿದೆ. ಭಾನುವಾರ ಹೊರತುಪಡಿಸಿ, ವಾರದ ಉಳಿದೆಲ್ಲ ದಿನಗಳಲ್ಲಿ ಸಂಜೆ 7ಕ್ಕೆ ಈ ಧಾರಾವಾಹಿ ಪ್ರಸಾರಗೊಳ್ಳಲಿದೆ.

‘ಅಂತಃಪುರ’ ಧಾರಾವಾಹಿಯ ಕಥೆಯ ಕೇಂದ್ರ ವೀರಗಡ ಎನ್ನುವ ಸ್ಥಳ. ಇಲ್ಲಿನ ಪ್ರಸಿದ್ಧ ಮನೆತನದ ವಾರಸುದಾರನಾದ ಸುದೀಪನನ್ನು ಮೈಸೂರಿನ ಸರಳ ಸ್ವಭಾವದ ಹುಡುಗಿ ಸಹನಾ ಪ್ರೀತಿಸುತ್ತಾಳೆ.

ಪ್ರೀತಿಸಿದವನ ಜೊತೆ ಮೊದಲ ಬಾರಿಗೆ ವೀರಗಡಕ್ಕೆ ತೆರಳಿದಾಗ ಅಲ್ಲಿನ ಮನೆಯೊಡತಿ ರುದ್ರಾಣಿ ದೇವಿಯಿಂದ ಕಹಿ ಸತ್ಯವೊಂದು ಸಹನಾಳ ಅನುಭವಕ್ಕೆ ಬರುತ್ತದೆ. ಸಹನಾ ಮತ್ತು ಸುದೀಪ್ ವೀರಗಡ ಮನೆತನದಿಂದ ಪಾರಾಗಲು ಪಡುವ ಪರಿಪಾಟ ಹಾಗೂ ಮದುವೆಯಾಗಿ ರುದ್ರಾಣಿ ದೇವಿಯನ್ನು ಎದುರಿಸುವ ರೀತಿಯನ್ನು ಅನಾವರಣಗೊಳಿಸುವ ಕಥೆ ಧಾರಾವಾಹಿಯಲ್ಲಿದೆ.

ನಟರೂ ಆದ ಅರವಿಂದ್ ಕೌಶಿಕ್ ‘ಅಂತಃಪುರ’ ಧಾರಾವಾಹಿಯ ನಿರ್ದೇಶಕರು. ನುರಿತ ಕಲಾವಿದರು ಹಾಗೂ ತಂತ್ರಜ್ಞರು ಈ ಧಾರಾವಾಹಿ ಬಳಗದಲ್ಲಿದ್ದಾರೆ ಎಂದು ವಾಹಿನಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT