ನವದೆಹಲಿ (ಪಿಟಿಐ): ಮೋದಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮುಕೇಶ್ ಅಂಬಾನಿ, ಗೌತಮ್ ಅದಾನಿ, ಸುನಿಲ್ ಮಿತ್ತಲ್, ಅಶೋಕ್ ಹಿಂದುಜಾ ಸೇರಿದಂತೆ ಉದ್ಯಮಿಗಳ ದಂಡೇ ಸೇರಿತ್ತು.
ಯಾರ್್ಯಾರು ಇದ್ದರು?: ಮುಕೇಶ್ ಅಂಬಾನಿ ಪತ್ನಿ ನೀತಾ, ಇಬ್ಬರು ಪುತ್ರರು, ಸಹೋದರ ಅನಿಲ್ ಹಾಗೂ ಅವರ ಕುಟುಂಬ, ತಾಯಿ ಕೋಕಿಲಾಬೆನ್ ಅಂಬಾನಿ, ಹಿಂದುಜಾ ಸಮೂಹ ಕಂಪೆನಿಗಳ ಅಧ್ಯಕ್ಷ ಅಶೋಕ್ ಹಿಂದುಜಾ, ಎಸ್ಸಾರ್್ ಮುಖ್ಯಸ್ಥ ಶಶಿ ರುಯಾ, ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್್ ರುಯಾ.
ಸುನೀಲ್, ರಾಜನ್ ಮತ್ತು ರಾಕೇಶ್ ಮಿತ್ತಲ್, ಡಿಎಲ್ ಎಫ್್ ಉಪಾಧ್ಯಕ್ಷ ರಾಜೀವ್್ ಸಿಂಗ್್, ಹೀರೊ ಮೋಟೊ ಕಾರ್ಪ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಪವನ್್ ಮುಂಜಾಲ್, ಸುಜಲಾನ್ ಗ್ರೂಪ್್ ಅಧ್ಯಕ್ಷ ತುಳಸಿ ತಂತಿ, ವೀಡಿಯೊಕಾನ್್ ಸಮೂಹದ ರಾಜ್ಕುಮಾರ್ ಧೂತ್, ಏರ್ವೇಸ್್ ಸಂಸ್ಥಾಪಕ ಅಧ್ಯಕ್ಷ ನರೇಶ್ ಗೋಯಲ್, ಏರ್ಏಷ್ಯಾ ಇಂಡಿಯಾ ಸಿಇಒ ಮಿಟ್ಟು ಚಾಂಡಿಲ್ಯ, ಎಸ್್ ಬ್ಯಾಂಕ್ ಅಧ್ಯಕ್ಷ ರಾಣಾ ಕಪೂರ್, ನಾಸ್ಕಾಂ ಅಧ್ಯಕ್ಷ ಆರ್.ಚಂದ್ರಶೇಖರ್, ಟಾಟಾ ಸಮೂಹದ ವಿಶ್ರಾಂತ ಅಧ್ಯಕ್ಷ ರತನ್್ ಟಾಟಾ, ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ವಿದೇಶಪ್ರಯಾಣದಲ್ಲಿದ್ದ ಕಾರಣ ಸಮಾರಂಭದಲ್ಲಿ ಭಾಗವಹಿಸಲಿಲ್ಲ.
ತಾರಾ ಮೆರುಗು: ಸಲ್ಮಾನ್ ಖಾನ್, ಅವರ ತಂದೆ ಸಲೀಂ ಖಾನ್್, ತಾರಾ ದಂಪತಿ ಧರ್ಮೇಂದ್ರ– ಹೇಮಾಮಾಲಿನಿ, ಅನುಪಮ್ ಖೇರ್–ಕಿರಣ್್ ಖೇರ್, ಶತ್ರುಘ್ನ ಸಿನ್ಹಾ, ವಿನೋದ್್ ಖನ್ನಾ , ವಿವೇಕ್್ ಒಬೆರಾಯ್, ಚಿತ್ರ ನಿರ್ಮಾಪಕ ಮಧುರ್್ ಭಂಡಾರ್ಕರ್, ಸಂಗೀತ ಸಂಯೋಜಕ ಬಪ್ಪಿ ಲಹರಿ, ಗಾಯಕ ಮನೋಜ್್ ತಿವಾರಿ ಇದ್ದರು.
ಅಮಿತಾಬ್ ಬಚ್ಚನ್, ರಜನಿಕಾಂತ್, ಲತಾ ಮಂಗೇಶ್ಕರ್ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಇವರೆಲ್ಲ ಬಂದಿರಲಿಲ್ಲ. ‘ಅನಾರೋಗ್ಯದ ಕಾರಣ ಸಮಾರಂಭಕ್ಕೆ ಬರುತ್ತಿಲ್ಲ. ನರೇಂದ್ರ ಭಾಯ್್ ನಿಮ್ಮ ಈ ಹೊಸ ಪಯಣದಲ್ಲಿ ಇಂದು ಇಡೀ ದೇಶ ನಿಮ್ಮೊಂದಿಗೆ ಇದೆ’ ಎಂದು ಲತಾ ಅವರು ಮೋದಿ ಅವರಿಗೆ ಪತ್ರ ಬರೆದಿದ್ದಾರೆ.