ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬಾನಿ, ಅದಾನಿ, ಹಿಂದೂಜಾ ಉಪಸ್ಥಿತಿ

Last Updated 26 ಮೇ 2014, 19:47 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮೋದಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮುಕೇಶ್‌ ಅಂಬಾನಿ, ಗೌತಮ್‌ ಅದಾನಿ, ಸುನಿಲ್‌ ಮಿತ್ತಲ್, ಅಶೋಕ್‌ ಹಿಂದುಜಾ ಸೇರಿದಂತೆ ಉದ್ಯಮಿಗಳ ದಂಡೇ ಸೇರಿತ್ತು.

ಯಾರ್‍್ಯಾರು ಇದ್ದರು?: ಮುಕೇಶ್‌ ಅಂಬಾನಿ ಪತ್ನಿ ನೀತಾ, ಇಬ್ಬರು ಪುತ್ರರು, ಸಹೋದರ ಅನಿಲ್‌ ಹಾಗೂ ಅವರ ಕುಟುಂಬ, ತಾಯಿ ಕೋಕಿಲಾಬೆನ್‌ ಅಂಬಾನಿ, ಹಿಂದುಜಾ ಸಮೂಹ ಕಂಪೆನಿಗಳ ಅಧ್ಯಕ್ಷ ಅಶೋಕ್‌ ಹಿಂದುಜಾ, ಎಸ್ಸಾರ್‌್     ಮುಖ್ಯಸ್ಥ ಶಶಿ ರುಯಾ, ಮುಖ್ಯಕಾರ್ಯ­ನಿರ್ವಹಣಾಧಿಕಾರಿ ಪ್ರಶಾಂತ್‌್ ರುಯಾ.

ಸುನೀಲ್‌, ರಾಜನ್‌ ಮತ್ತು ರಾಕೇಶ್‌ ಮಿತ್ತಲ್, ಡಿಎಲ್‌ ಎಫ್‌್ ಉಪಾಧ್ಯಕ್ಷ ರಾಜೀವ್‌್ ಸಿಂಗ್‌್, ಹೀರೊ ಮೋಟೊ ಕಾರ್ಪ್‌ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಪವನ್‌್ ಮುಂಜಾಲ್‌, ಸುಜಲಾನ್‌ ಗ್ರೂಪ್‌್ ಅಧ್ಯಕ್ಷ ತುಳಸಿ ತಂತಿ, ವೀಡಿಯೊಕಾನ್‌್ ಸಮೂಹದ ರಾಜ್‌ಕುಮಾರ್‌ ಧೂತ್‌, ಏರ್‌ವೇಸ್‌್ ಸಂಸ್ಥಾಪಕ ಅಧ್ಯಕ್ಷ ನರೇಶ್‌ ಗೋಯಲ್‌, ಏರ್‌ಏಷ್ಯಾ ಇಂಡಿಯಾ ಸಿಇಒ ಮಿಟ್ಟು ಚಾಂಡಿಲ್ಯ, ಎಸ್‌್ ಬ್ಯಾಂಕ್‌ ಅಧ್ಯಕ್ಷ ರಾಣಾ ಕಪೂರ್‌, ನಾಸ್ಕಾಂ ಅಧ್ಯಕ್ಷ ಆರ್‌.ಚಂದ್ರಶೇಖರ್‌, ಟಾಟಾ ಸಮೂಹದ ವಿಶ್ರಾಂತ ಅಧ್ಯಕ್ಷ ರತನ್‌್ ಟಾಟಾ, ಅಧ್ಯಕ್ಷ ಸೈರಸ್‌ ಮಿಸ್ತ್ರಿ ಅವರು ವಿದೇಶ­ಪ್ರಯಾಣದಲ್ಲಿದ್ದ ಕಾರಣ ಸಮಾರಂಭದಲ್ಲಿ ಭಾಗವಹಿಸಲಿಲ್ಲ.

ತಾರಾ ಮೆರುಗು:  ಸಲ್ಮಾನ್‌ ಖಾನ್‌, ಅವರ ತಂದೆ ಸಲೀಂ ಖಾನ್‌್, ತಾರಾ ದಂಪತಿ ಧರ್ಮೇಂದ್ರ– ಹೇಮಾ­ಮಾಲಿನಿ, ಅನುಪಮ್‌ ಖೇರ್‌–ಕಿರಣ್‌್ ಖೇರ್‌, ಶತ್ರುಘ್ನ ಸಿನ್ಹಾ,  ವಿನೋದ್‌್ ಖನ್ನಾ , ವಿವೇಕ್‌್ ಒಬೆರಾಯ್‌, ಚಿತ್ರ ನಿರ್ಮಾಪಕ ಮಧುರ್‌್ ಭಂಡಾರ್ಕರ್‌, ಸಂಗೀತ ಸಂಯೋಜಕ ಬಪ್ಪಿ ಲಹರಿ, ಗಾಯಕ ಮನೋಜ್‌್ ತಿವಾರಿ ಇದ್ದರು.

ಅಮಿತಾಬ್‌ ಬಚ್ಚನ್‌, ರಜನಿಕಾಂತ್‌, ಲತಾ ಮಂಗೇಶ್ಕರ್‌ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಇವರೆಲ್ಲ ಬಂದಿ­ರಲಿಲ್ಲ. ‘ಅನಾರೋಗ್ಯದ ಕಾರಣ ಸಮಾ­ರಂಭಕ್ಕೆ ಬರುತ್ತಿಲ್ಲ. ನರೇಂದ್ರ ಭಾಯ್‌್ ನಿಮ್ಮ ಈ ಹೊಸ ಪಯಣದಲ್ಲಿ ಇಂದು ಇಡೀ ದೇಶ ನಿಮ್ಮೊಂದಿಗೆ ಇದೆ’ ಎಂದು ಲತಾ ಅವರು ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT