ಮುಂಬೈ: ದಾದ್ರದಲ್ಲಿನ ಬಾಬಾ ಸಾಹೇಬ್ ಅಂಬೇಡ್ಕರ್ ಭವನ ನೆಲಸಮ ಪ್ರಕರಣ ಹೊಸ ತಿರುವು ಪಡೆದಿದ್ದು ಮಹಾರಾಷ್ಟ್ರದ ಮಾಹಿತಿ ಆಯುಕ್ತರಾದ ರತ್ನಾಕರ್ ಗಾಯಕ್ವಾಡ್ ಅವರು ಅಂಬೇಡ್ಕರ್ ಅವರ ಸಹೋದರರು ಮತ್ತು ಮೊಮ್ಮಕ್ಕಳು ಗೂಂಡಗಳು ಎಂದು ದೂರಿದ್ದಾರೆ.
ಆನ್ಲೈನ್ ಸುದ್ದಿ ಜಾಲ ‘ಫಸ್ಟ್ಪೋಸ್ಟ್’ಗೆ ನೀಡಿರುವ ಸಂದರ್ಶನದಲ್ಲಿ ಗಾಯಕ್ವಾಡ್ ಅವರು ಅಂಬೇಡ್ಕರ್ ಅವರ ಆಸ್ತಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆರೋಪ ಮಾಡಿದ್ದಾರೆ.