‘ಸಾಕಷ್ಟು ಒತ್ತಡ ಇದ್ದರೂ ಗೋವಾದಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಕಠಿಣ ಕ್ರಮ ಕೈಗೊಂಡಿದ್ದೆ. ಸಾಕಷ್ಟು ಕಂಪೆನಿಗಳಿಗೆ ಪರಿಸರ ಅನುಮತಿ ನಿರಾಕರಿಸಿದ್ದೆ. ಗೋವಾದಲ್ಲಿರುವ ಗಣಿಗಳೆಲ್ಲ ಈಗ ಮುಚ್ಚಿದೆ ಎಂದರೆ ಅದಕ್ಕೆ ನಾನು ತೆಗೆದುಕೊಂಡ ನಿರ್ದಾಕ್ಷಿಣ್ಯ ಕ್ರಮವೇ ಕಾರಣ. ಆದರೆ, ಕಾಂಗ್ರೆಸ್ ನಾಯಕರು ಅನುಮತಿ ನಿರಾಕರಿಸಿದ ಕಾರಣಕ್ಕೆ ನನ್ನ ಮೇಲೆ ವ್ಯವಸ್ಥಿತ ಸಂಚು ರೂಪಿಸಿ ಮೂಲೆಗುಂಪು ಮಾಡಿದರು. ಗೋವಾದ ಅರ್ಥವ್ಯವಸ್ಥೆ ನನ್ನಿಂದಲೇ ಹಾಳಾಯಿತು ಎಂಬ ಆರೋಪ ಮಾಡಿದರು’ ಎಂದರು.
ಯುಪಿಎ ಸರ್ಕಾರದಲ್ಲಿ ಪರಿಸರ ಸಚಿವೆಯಾಗಿದ್ದ ಜಯಂತಿ ನಟರಾಜನ್ 2013ರಲ್ಲಿ ಗೋವಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ 93 ಗಣಿಗಾರಿಕೆ ಯೋಜನೆಗಳಿಗೆ ಪರಿಸರ ಅನುಮತಿ ನಿರಾಕರಿಸಿದ್ದರು.