ತುಮಕೂರು: ಮನೆಯಲ್ಲಿ ಅಕ್ರಮವಾಗಿ ಬಂದೂಕು ಇರಿಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಕ್ಯಾತ್ಸಂದ್ರ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.
ಊರ್ಡಿಗೆರೆ ಹೋಬಳಿ ನಾಯಕನಪುರ ಗ್ರಾಮದ ಕೃಷ್ಣಯ್ಯ(32) ಹಾಗೂ ನೆಲಮಂಗಲ ತಾಲ್ಲೂಕು ಲಕ್ಷ್ಮಿಪುರದ ನಿವಾಸಿ ಲಕ್ಷ್ಮೀಶ (28) ಬಂಧಿತರು.
ಕೃಷ್ಣಯ್ಯ ಮನೆಯಲ್ಲಿ ಅಕ್ರಮವಾಗಿ ಬಂದೂಕು ಇಟ್ಟುಕೊಂಡಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.