ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ: ವ್ಯಕ್ತಿ ಖುಲಾಸೆ

Last Updated 4 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಹಿಳೆಯ ಮೇಲೆ ಅತ್ಯಾಚಾರ ಹಾಗೂ ಬೆದರಿಕೆ ಆರೋಪದ ಮೇಲೆ ಬಂಧಿತನಾಗಿದ್ದ ಹರಿಯಾಣ ಮೂಲದ ವ್ಯಕ್ತಿಯನ್ನು ದೆಹಲಿ ನ್ಯಾಯಾಲಯ ಶುಕ್ರವಾರ ಖುಲಾಸೆ ಮಾಡಿದೆ.

‘ಪತಿ ಹಾಗೂ ಮಾವನ ಒತ್ತಾಯದಿಂದ ಆತನ ವಿರುದ್ಧ ಪ್ರಕರಣ ದಾಖಲಿಸಿದೆ’ ಎಂದು ಮಹಿಳೆ ನ್ಯಾಯಾ­ಲಯಕ್ಕೆ ತಿಳಿಸಿದ್ದರಿಂದ ಆರೋಪಿ­ಯನ್ನು ಬಿಡುಗಡೆ ಮಾಡಲಾಗಿದೆ. 

‘ಆಕೆ ಇಚ್ಛಾಪೂರ್ವಕವಾಗಿ ಆತ­ನೊಂದಿಗೆ ದೈಹಿಕ ಸಂಬಂಧ ಹೊಂದಿ­ದ್ದಳು’ ಎಂದು  ಹೆಚ್ಚು­ವರಿ ಸೆಷನ್ಸ್‌ ನ್ಯಾಯಾಧೀಶ ವೀರೇಂದರ್‌ ಭಟ್‌  ತಿಳಿಸಿದ್ದಾರೆ.

‘ಆರೋಪಿಗೆ ವಿರುದ್ಧ­­ವಾಗುವಂತಹ ಯಾವುದೇ ವಿಷಯವೂ ಮಹಿಳೆಯ ಹೇಳಿಕೆಯಲ್ಲಿ ಕಂಡು­ಬಂದಿಲ್ಲ’  ಎಂದೂ ಅವರು ಹೇಳಿದ್ದಾರೆ. ‘ಬಾಡಿಗೆ ಮನೆಯಲ್ಲಿರುವ ವ್ಯಕ್ತಿ  ನನ್ನ ಮೇಲೆ  ಅತ್ಯಾಚಾರ ನಡೆಸಿದ್ದಾನೆ. ಬಳಿಕ ಆತ ನನ್ನ ನಗ್ನ ಚಿತ್ರಗಳನ್ನು ತೋರಿಸಿ  ಹಣಕ್ಕಾಗಿ ಬೆದರಿಸುತ್ತಿದ್ದ’ ಎಂದು ಮಹಿಳೆ ದೂರು ನೀಡಿದ್ದಳು. ಈ ಹಿನ್ನೆಲೆಯಲ್ಲಿ 2013 ಅಕ್ಟೋಬರ್‌  26ರಂದು ಆತನನ್ನು ಬಂಧಿಸಲಾಗಿತ್ತು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT