ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಸಂತ್ರಸ್ತೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ

Last Updated 3 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಐಎಎನ್‌ಎಸ್‌): ತನ್ನ ಮೇಲೆ ಅತ್ಯಾಚಾರ ನಡೆಸಿದ ಯುವಕ­ನನ್ನು ಕ್ಷಮಿಸು­ವಂತೆ ಆದೇಶಿಸಿದ ಗ್ರಾಮ ನ್ಯಾಯ ಪಂಚಾಯ್ತಿಯ ಕ್ರಮದಿಂದ ಬೇಸತ್ತ ಮಹಿಳೆ­ಯೊಬ್ಬರು ಸೀಮೆಎಣ್ಣೆ ಸುರಿದು­ಕೊಂಡು ಆತ್ಮಹತ್ಯೆ ಮಾಡಿ­ಕೊಂಡ ಘಟನೆ ಪಶ್ಚಿಮಬಂಗಾಳದ ಮಾಲ್ಡಾದ ಮಾಣಿಕ್‌ಚಾಕ್‌ ಪ್ರದೇಶ­ದಲ್ಲಿ ಗುರುವಾರ ನಡೆದಿದೆ.

ಎರಡು ಮಕ್ಕಳ ತಾಯಿಯ ಮೇಲೆ ಆಕೆ ಗಂಡ ಮನೆಯಲ್ಲಿಲ್ಲದ ಸಂದರ್ಭ­ದಲ್ಲಿ ರವೀಂದ್ರ ಮಂಡಲ್‌ ಎಂಬ ಯುವಕ ಅತ್ಯಾಚಾರ ನಡೆಸಿದ್ದನು. ಆಕೆಯ ಗಂಡ ಗ್ರಾಮ ನ್ಯಾಯ ಪಂಚಾ­ಯತಿ­ಯಲ್ಲಿ ಯುವಕನಿಗೆ ಸರಿಯಾದ ಶಿಕ್ಷೆ ನೀಡುವಂತೆ ಕೋರಿ­ದ್ದರು.

ಆದರೆ ಪಂಚಾಯ್ತಿ, ಪೊಲೀಸರಿಗೆ ದೂರು ನೀಡದೇ, ಯುವಕನನ್ನು ಕ್ಷಮಿಸುವಂತೆ  ಅತ್ಯಾಚಾರ ಸಂತ್ರಸ್ತೆಗೆ ತಿಳಿಸಿದ್ದರು.
ಇದರಿಂದ ಮನನೊಂದ ಮಹಿಳೆ ತನ್ನ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT