ಕುಂದಾಪುರ: ಕಾರ್ಮಿಕ ನಿಧಿಯನ್ನು ದುರ್ಬಳಿಕೆ ಮಾಡುವ, ಕಾರ್ಮಿಕರ ಹಕ್ಕುಗಳ ರಕ್ಷಣೆ ಮಾಡದೆ ಇರುವ ಸರ್ಕಾರಿ ಇಲಾಖೆಗಳ ಹಾಗೂ ಅಧಿ ಕಾರಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ಸಿಡಿದೇಳಬೇಕು ಎಂದು ರಾಜ್ಯ ಕಟ್ಟಡ ಮತ್ತು ಇತರ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಎನ್. ವೀರಸ್ವಾಮಿ ಹೇಳಿದರು.
ನಗರದ ಕಾರ್ಮಿಕ ಭವನದಲ್ಲಿ ಭಾನುವಾರ ನಡೆದ ತಾಲ್ಲೂಕು ಕಟ್ಟಡ ಹಾಗೂ ಇತರೆ ಕಾರ್ಮಿಕರ ಸಂಘದ 8ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಿಐಟಿಯು ಸಂಘಟನೆಯ ಹಲವು ದಶಕಗಳ ಹೋರಾಟದ ಫಲವಾಗಿ ಕಾರ್ಮಿಕ ಕಲ್ಯಾಣ ನಿಧಿಯ ಸ್ಥಾಪನೆ-ಯಾಗಿದೆಯೇ ಹೊರತು ಸರ್ಕಾರದ ಸ್ವಇಚ್ಚೆಯ ಕೊಡುಗೆಯಲ್ಲ.
ಕಾರ್ಮಿ ಕರ ಕಲ್ಯಾಣಗಳಿಗಾಗಿ ಬಳಕೆಯಾಗ ಬೇಕಾದ ಈ ನಿಧಿಯನ್ನು ಇತ್ತೀಚಿನ ದಿನಗಳಲ್ಲಿ ಕಾರ್ಮಿಕ ಕಲ್ಯಾಣ ಭವನಗಳ ನಿರ್ಮಾಣದ ಹೆಸರಿನಲ್ಲಿ ವ್ಯಯ ಮಾಡಲಾಗುತ್ತಿದೆ. ಕಮಿಷನ್ ಆಸೆಗಾಗಿ ಕೋಟ್ಯಂತರ ರೂಪಾಯಿ ದುರ್ಬಳಕೆ ಮಾಡುವ ಮೂಲಕ ಕಾರ್ಮಿಕ ವರ್ಗದವರಿಗೆ ನ್ಯಾಯ ಯುತವಾಗಿ ಸಿಗಬೇಕಾದ ಸವಲತ್ತು ಗಳ ವಂಚನೆಗಾಗಿ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗುತ್ತಿದೆ ಎಂದರು.
ಇದೇ 25ರಿಂದ ಉಡುಪಿಯ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಇರುವ ಕಾರ್ಮಿಕ ಇಲಾಖೆಯ ಎದುರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದರು.
ಹಿರಿಯ ಕಾರ್ಮಿಕ ಮುಖಂಡ ಯು.ದಾಸು ಭಂಡಾರಿ ಅಧ್ಯಕ್ಷತೆ ವಹಿಸಿ ದ್ದರು. ಉಡುಪಿ ಜಿಲ್ಲಾ ಸಿಐಟಿಯು ಅಧ್ಯಕ್ಷ ಕೆ ಶಂಕರ, ಕಾರ್ಮಿಕ ಸಂಘಟನೆ ಯಗಳ ಪ್ರಮುಖರಾದ ಸುರೇಶ್ ಕಲ್ಲಾಗರ, ಜಗದೀಶ್ ಆಚಾರ್ ಹೆಮ್ಮಾಡಿ, ಶ್ರೀನಿವಾಸ ಪೂಜಾರಿ, ರಾಜೀವ ಪಡುಕೋಣೆ, ಸಂತೋಷ್ ಹೆಮ್ಮಾಡಿ, ಗಣೇಶ್ ತೊಂಡೆಮಕ್ಕಿ, ಗಣೇಶ್ ಮೊಗವೀರ, ಚಂದ್ರ ಅಂಪಾರ್, ಸುಧಾಕರ ಕುಂಭಾಶಿ, ಸತೀಶ್ ತೆಕ್ಕಟ್ಟೆ, ಸುರೇಶ್ ದೇವ ಲ್ಕುಂದ, ಜಿತೇಂದ್ರ ಕೊಣಿ, ಶ್ರೀಧರ ಉಪ್ಪುಂದ ಮತ್ತಿತರರು ಉಪ ಸ್ಥಿತರಿದ್ದರು.