ನವದೆಹಲಿ (ಪಿಟಿಐ): ಬಿಜೆಪಿ ಸಂಸದೀಯ ಮಂಡಳಿಯಿಂದ ಅತ್ಯಂತ ಹಿರಿಯರಾದ ಹಾಗೂ ‘ತ್ರಿಮೂರ್ತಿಗಳು’ ಎಂದೇ ಹೆಸರಾದ ಎ.ಬಿ. ವಾಜಪೇಯಿ, ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರನ್ನು ಕೈಬಿಡಲಾಗಿದೆ.
ಪಕ್ಷದ ಅತ್ಯುನ್ನತ ನಿರ್ಧಾರ ಸಮಿತಿಯಿಂದ ಈ ಮೂವರನ್ನು ಕೈಬಿಡುವ ಮೂಲಕ ಪಕ್ಷದ ಹಿಡಿತವು ‘ಹೊಸ ಪೀಳಿಗೆ’ಗೆ ಸಂಪೂರ್ಣ ವರ್ಗಾವಣೆಗೊಂಡಂತೆ ಆಗಿದೆ. ಅಲ್ಲದೇ, ಪಕ್ಷಕ್ಕೆ ಸಂಬಂಧಿಸಿದಂತೆ ಎಲ್ಲ ಹಂತಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಛಾಪು ನೆಲೆಗೊಳ್ಳುತ್ತಿರುವುದು ಸ್ಪಷ್ಟವಾಗಿದೆ.
ಈಗ ಈ ಮೂವರನ್ನು ಸಾಂಕೇತಿಕ ಗೌರವದ ದೃಷ್ಟಿಯಿಂದ ಐವರು ಸದಸ್ಯರ ‘ಮಾರ್ಗದರ್ಶಕ ಮಂಡಲ್’ಗೆ ಸೇರಿಸಿಕೊಳ್ಳಲಾಗಿದೆ. ಮೋದಿ, ರಾಜನಾಥ್ ಸಿಂಗ್ ಈ ಮಂಡಳಿಯ ಇನ್ನಿಬ್ಬರು ಸದಸ್ಯರು.
ಪಕ್ಷದ ಹೊಸ ಅಧ್ಯಕ್ಷ ಅಮಿತ್ ಷಾ ಅವರ ನೇತೃತ್ವದಲ್ಲಿ ಪುನರ್ರಚಿತವಾಗಿರುವ ಈ ಮಂಡಳಿಗೆ ಮೂರನೇ ಬಾರಿಗೆ ಮಧ್ಯಪ್ರದೇಶ
ಸ್ಥಾಪಕರು ವೃದ್ಧಾಶ್ರಮಕ್ಕೆ... ಪಕ್ಷದ ಸ್ಥಾಪಕ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ ಅವರನ್ನು ಸಂಸದೀಯ ಮಂಡಳಿಯಿಂದ ಕೈಬಿಡುವ ಮೂಲಕ ಬಿಜೆಪಿ ಅವರಿಬ್ಬರನ್ನೂ ವೃದ್ಧಾಶ್ರಮಕ್ಕೆ ಕಳುಹಿಸಿದೆ. ಪಕ್ಷದ ‘ಮಾರ್ಗದರ್ಶಕ ಮಂಡಳಿ’ಯು ಕೇವಲ ‘ಮೂಕದರ್ಶಕ ಮಂಡಳಿ’ಯಾಗಿರಲಿದೆ. |
ಮುಖ್ಯಮಂತ್ರಿಯಾಗಿರುವ ಶಿವರಾಜ್ ಸಿಂಗ್ ಚೌಹಾಣ್, ಪಕ್ಷದ ಪ್ರಧಾನ ಕಾರ್ಯದರ್ಶಿ ಜೆ.ಪಿ.ನಡ್ಡಾ ಅವರು ಹೊಸದಾಗಿ ಪ್ರವೇಶಿಸಿದ್ದಾರೆ. ಚುನಾವಣಾ ಕಣಕ್ಕೆ ಅಭ್ಯರ್ಥಿಗಳನ್ನು ನಿರ್ಧರಿಸುವ ಪಕ್ಷದ ಕೇಂದ್ರ ಚುನಾವಣಾ ಸಮಿತಿಯಲ್ಲೂ ಈ ಇಬ್ಬರು ಅವಕಾಶ ಪಡೆದಿದ್ದಾರೆ.
ಕರ್ನಾಟಕದ ನಾಯಕ ಅನಂತ್ಕುಮಾರ್ ಅವರನ್ನು ಕೈಬಿಡುವ ಸಾಧ್ಯತೆ ಇದೆ ಎಂಬ ವದಂತಿಗಳು ಕೇಳಿಬಂದಿದ್ದರೂ ಅವರ ಸ್ಥಾನ ಅಬಾಧಿತವಾಗಿದೆ.
ಅಮಿತ್ ಷಾ ಅವರು ಬಿಜೆಪಿ ವರಿಷ್ಠರೊಂದಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿದ ನಂತರ ಈ ಬದಲಾವಣೆಗಳನ್ನು ಮಾಡಿದ್ದಾರೆ. ವಾಜಪೇಯಿ ಅವರು ಅನಾರೋಗ್ಯದಿಂದಾಗಿ ಸುಮಾರು 10 ವರ್ಷಗಳಿಂದ ಸಾರ್ವಜನಿಕ ಜೀವನದಿಂದ ದೂರವಿದ್ದರೂ, ಅವರನ್ನು ಎನ್ಡಿಎ ಅಧ್ಯಕ್ಷರನ್ನಾಗಿ ಉಳಿಸಿಕೊಳ್ಳಲಾಗಿತ್ತು. ಪಕ್ಷವನ್ನು ಮೋದಿ ಅವರು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಮುನ್ನ ಅಡ್ವಾಣಿ ಎನ್ಡಿಎ ಕಾರ್ಯಾಧ್ಯಕ್ಷರಾಗಿದ್ದರು.
ಇದೇ ವೇಳೆ ಕೇಂದ್ರ ಚುನಾವಣಾ ಸಮಿತಿಯನ್ನೂ (ಸಿಇಸಿ) ಪುನರ್ರಚಿಸಲಾಗಿದ್ದು, ಉತ್ತರ ಪ್ರದೇಶದ ವಿನಯ್ ಕಟಿಯಾರ್ ಅವರನ್ನು ಕೈಬಿಡಲಾಗಿದೆ. ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಸರೋಜ್ ಪಾಂಡೆ ಅವರ ಜಾಗಕ್ಕೆ ಈಗಿನ ಮಹಿಳಾ ಮೋರ್ಚಾ ಮುಖ್ಯಸ್ಥೆ ವಿಜಯಾ ರಾಹತ್ಕರ್ ಅವರನ್ನು ನೇಮಿಸಲಾಗಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುಆಲ್ ಓರಾಮ್ ಅವರೂ ಈ ಸಮಿತಿಯಲ್ಲಿ ಸೇರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.