ಬೆಂಗಳೂರು: ಮಹತ್ವದ ಪಂದ್ಯದಲ್ಲಿ ಚುರುಕಿನ ಆಟವಾಡಿದ ಅನರ್ಘ್ಯಾ ಮಂಜುನಾಥ್ ಮತ್ತು ಸುಜನ್ ಭಾರದ್ವಾಜ್ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಕೆಡೆಟ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಕಂಟೋನ್ಮೆಂಟ್ನಲ್ಲಿರುವ ರೈಲ್ ಕ್ಲಬ್ನಲ್ಲಿ ಗುರುವಾರ ನಡೆದ ಬಾಲಕರ ವಿಭಾಗದ ಫೈನಲ್ನಲ್ಲಿ ಸುಜನ್ 11–6,11–6,11–7ರಲ್ಲಿ ಕೆ. ಶ್ರೀಕಾಂತ್ ಅವರನ್ನು ಮಣಿಸಿದರು.
ಸೆಮಿಫೈನಲ್ ಪಂದ್ಯಗಳಲ್ಲಿ ಸುಜನ್ 11–7, 11–5, 9–11, 11–6ರಲ್ಲಿ ಕೆ.ಜೆ. ಆಕಾಶ್ ಮೇಲೂ, ಶ್ರೀಕಾಂತ್ 6–11, 10–12, 11–7, 11–5, 11–4ರಲ್ಲಿ ಬಿ.ಎನ್. ಚೇತನ್ ವಿರುದ್ಧವೂ ವಿರುದ್ಧವೂ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದರು.
ಬಾಲಕಿಯರ ವಿಭಾಗದ ಫೈನಲ್ನಲ್ಲಿ ಅನರ್ಘ್ಯಾ 12-10, 9-11, 11-4, 8-11, 12-10ರಲ್ಲಿ ಯಶಸ್ವಿನಿ ಎದುರು ಜಯಭೇರಿ ಮೊಳಗಿಸಿದರು.
ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಅನರ್ಘ್ಯಾ 11-4, 11-5, 11-7ರಲ್ಲಿ ಎಚ್. ಇಶಾನಿ ಮೇಲೂ, ಯಶಸ್ಸಿನಿ 11-4, 11-3, 11-1ರಲ್ಲಿ ತೃಪ್ತಿ ಪುರೋಹಿತ್ ವಿರುದ್ಧವೂ ಗೆಲುವು ಪಡೆದಿದ್ದರು.