ಹಿಮಾಚಲ ಪ್ರದೇಶದ ರಾಮಪುರ ಬಳಿಯ ಬುಶಹರ್ನಲ್ಲಿ ಅಭಿತೇಜ್ ಅವರು ಬೈಕ್ನಲ್ಲಿ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಅಭಿತೇಜ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಭಿತೇಜ್ ಅವರ ತಂದೆ ಅಭಯ್ ಸಿಂಗ್, ಭಗತ್ ಸಿಂಗ್ ಅವರ ಕಿರಿಯ ಸಹೋದರ. ಅಭಿತೇಜ್ ಅವರ ಸಾವಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಅಭಿತೇಜ್ ಸಿಂಗ್ ಹಲವು ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಅಕ್ಟೋಬರ್ 27, 2015ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ಅವರು ಸಂವಾದವೊಂದರಲ್ಲಿ ಮಾತನಾಡುತ್ತಾ, ‘ಅಸಹಿಷ್ಣುತೆ ದೇಶಕ್ಕೆ ಅಪಾಯ’ ಎಂದು ಎಚ್ಚರಿಸಿದ್ದರು. ಅವರ ಭಾಷಣದ ಪೂರ್ಣ ಪಾಠ ಇಲ್ಲಿದೆ.
http://goo.gl/eY5Ti1