ಉಪ್ಪಿನಂಗಡಿ (ದಕ್ಷಿಣ ಕನ್ನಡ): ರಾಷ್ಟ್ರೀಯ ಹೆದ್ದಾರಿ 75ರಲ್ಲಿ, ಗುಂಡ್ಯ ಸಮೀಪ ಅಡ್ಡಹೊಳೆ ಎಂಬಲ್ಲಿ ಬುಧವಾರ ಮದುವೆ ಕಾರ್ಯಕ್ರಮವೊಂದನ್ನು ಮುಗಿಸಿ ಹೋಗುತ್ತಿದ್ದ ಒಂದೇ ಕುಟುಂಬ ಸದಸ್ಯರಿದ್ದ ಬಸ್ ಮತ್ತು ಲಾರಿ ಡಿಕ್ಕಿ ಹೊಡೆದು ಬಸ್ನಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಅವರನ್ನು ಮಂಗಳೂರು ಮತ್ತು ನೆಲ್ಯಾಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬೆಂಗಳೂರು ಜೆ.ಪಿ. ನಗರ ಪರಿಸರದ ನಿವಾಸಿಗಳಾದ ನಾಗಭೂಷಣ್, ಶಶಿಭೂಷಣ್, ಜಯೇಂದ್ರ ಕುಮಾರ್, ಪ್ರೇಮದಾಸ್, ಚಂದ್ರಾವತಿ, ರಿಷಿತಾ ಮತ್ತು ಬಸ್ ಚಾಲಕ ಶಿವಮೂರ್ತಿ, ಕ್ಲೀನರ್ ರಂಗಸ್ವಾಮಿ ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡವರು ನೆಲ್ಯಾಡಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.