ಸಹನಾ ಕಾಂತಬೈಲು ಅವರ ‘ನಿಸರ್ಗದ ನಿಯಮ’ (ವಾ.ವಾ. ಜುಲೈ 1) ಪ್ರತಿಕ್ರಿಯೆ ಓದಿ ಆಶ್ಚರ್ಯವಾಯ್ತು. ಹಾವುಗಳನ್ನು ಹಿಡಿಯುವುದು ಮೂರ್ಖತನ ಎಂದು ಅವರು ಹೇಳಿದ್ದಾರೆ. ರೋಗ ಬರಬಾರದೆಂದು ಲಸಿಕೆ ಹಾಕುವ ಹಾಗೆ ಕಚ್ಚಬಾರದೆಂದು ಹಾವುಗಳನ್ನು ಉರಗತಜ್ಞರು ನಿರ್ಜನ ಪ್ರದೇಶದಲ್ಲಿ ಬಿಡುತ್ತಾರೆ.
ನಿಸರ್ಗ ನಿಯಮವೆಂದು ನಾನು ನಿರ್ಲಕ್ಷ್ಯ ಮಾಡಿ ನನ್ನ ಪದವೀಧರ ತಮ್ಮನನ್ನು ಕಳೆದುಕೊಂಡಿದ್ದೇನೆ. ಹಾವು ಮನುಷ್ಯನಿಗೆ ಅಪಾಯ ತಂದೊಡ್ಡುವುದನ್ನು ಅಲ್ಲಗಳೆಯುವ ಹಾಗಿಲ್ಲ.