ಹೈದರಾಬಾದ್ (ಐಎಎನ್ಎಸ್): ಕರ್ನೂಲ್ ಜಿಲ್ಲೆಯ ಅಳ್ಳಗಡ ವಿಧಾನಸಭೆಯಿಂದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭುಮಾ ಶೋಭಾ ನಾಗಿರೆಡ್ಡಿ ಜಯಗಳಿಸಿದ್ದರೂ ಈ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಯಲಿದೆ.
ಚುನಾವಣೆಗೆ ಎರಡು ವಾರ ಮೊದಲು ಏ.24 ರಂದು ಪ್ರಚಾರ ಮುಗಿಸಿ ಬರುತ್ತಿದ್ದಾಗ ನಾಗಿರೆಡ್ಡಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.
ಆದರೆ ಅವರು ತೆಲುಗು ದೇಶಂ ಪಕ್ಷದ ಅಭ್ಯರ್ಥಿ ಜಿ.ಪ್ರಭಾಕರ ರೆಡ್ಡಿ ಅವರನ್ನು 18,000 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.
ವೈಎಸ್ಆರ್ ಕಾಂಗ್ರೆಸ್ ಮಾನ್ಯತೆ ಪಡೆಯದ ಪಕ್ಷವಲ್ಲದ ಕಾರಣ ಚುನಾವಣೆಯನ್ನು ಆಯೋಗ ರದ್ದುಪಡಿಸಿರಲಿಲ್ಲ.
ನಾಗಿರೆಡ್ಡಿ ಅವರ ಹೆಸರು ಮತಪತ್ರಗಳಲ್ಲಿ ಸೇರ್ಪಡೆಯಾಗಿದ್ದ ರಿಂದ ಚುನಾವಣಾ ಆಯೋಗ ಅವರು ಸ್ಪರ್ಧಿಸಿರುವ ಅಭ್ಯರ್ಥಿ ಎಂದು ತಿಳಿಸಿತ್ತು. ಒಂದು ವೇಳೆ ಅವರು ಜಯಗಳಿಸಿದರೆ ಮರು ಚುನಾವಣೆ ನಡೆಸುವುದಾಗಿ ಹೇಳಿತ್ತು.
ಮೃತ ಅಭ್ಯರ್ಥಿಗೆ ಬಿದ್ದ ಮತಗಳನ್ನು ‘ನೋಟಾ’ ಮತಗಳಾಗಿ ಪರಿಗಣಿಸಬೇಕು ಎಂದು ಕೆಲವು ಚುನಾವಣಾ ಅಧಿಕಾರಿಗಳು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಆಯೋಗ ಈ ಸ್ಪಷ್ಟನೆ ನೀಡಿತ್ತು.