ಮೈಸೂರಿನ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ವೇದಿಕೆ ಸಿದ್ಧಪಡಿಸಬಾರದೆಂದು, ‘ದಸರಾ’ ಶಬ್ದ ಉಪಯೋಗಿಸಬಾರದೆಂದು ಪ್ರಮೋದಾ ದೇವಿಯವರು ಹೇಳಿರುವುದು ಸರಿಯಲ್ಲ.
ಅರಮನೆ ಜನರದ್ದು. ಜನ ಸೇವಕರಾಗಿ, ಪ್ರಧಾನ ಆಡಳಿತಗಾರರಾಗಿ ಅರಸರು ಇದ್ದುದರಿಂದ ಜನರ ಹಣದಲ್ಲಿ ಅದನ್ನು ನಿರ್ಮಿಸಲಾಗಿದೆ. ಆ ವ್ಯವಸ್ಥೆಯೇ ಹೋಗಿ ಪ್ರಜಾಪ್ರಭುತ್ವ ಬಂದ ಬಳಿಕ ಆ ಕುಟುಂಬಕ್ಕೆ ಜೀವನ ನಿರ್ವಹಣೆಗೆ ತೊಂದರೆಯಾಗದ ಹಾಗೆ ವ್ಯವಸ್ಥೆ ಮಾಡಿ ಅದನ್ನು ವಶಪಡಿಸಿಕೊಳ್ಳಬೇಕಾದುದು ಸರ್ಕಾರದ ಕರ್ತವ್ಯ.
ಜಯಚಾಮರಾಜೇಂದ್ರ ಒಡೆಯರ್ ಅವರು ತೀರಿಕೊಂಡ ವರ್ಷವೂ ಅರಮನೆ ಆವರಣದಲ್ಲಿ ನವರಾತ್ರಿ ಕಾರ್ಯಕ್ರಮಗಳು ನಡೆದದ್ದು ನೆನಪಿದೆ. ಸರ್ಕಾರ ಅರಮನೆ ವಶಪಡಿಸಿಕೊಳ್ಳುವ ಕಾನೂನು ಜಾರಿ ಮಾಡಲಿ. ಅಗತ್ಯಬಿದ್ದರೆ ಹೆಚ್ಚಿನ ಪರಿಹಾರ ಕೊಡಲಿ.