ನವದೆಹಲಿ (ಪಿಟಿಐ): ‘ವಿದೇಶಗಳ ಬ್್ಯಾಂಕುಗಳಲ್ಲಿ ಕಪ್ಪುಹಣ ಇರಿಸಿರುವವರ ಇಡೀ ಪಟ್ಟಿಯನ್ನು ಸರ್ಕಾರವು ಬುಧವಾರ ಸುಪ್ರೀಂಕೋರ್ಟ್ ಮುಂದಿಡಲಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಈ ವಿಷಯದಲ್ಲಿ ಸರ್ಕಾರ ಯಾರನ್ನೂ ರಕ್ಷಿಸುವುದಿಲ್ಲ ಎಂದ ಅವರು, ಸರ್ಕಾರವೇ ಹೆಸರನ್ನು ಬಹಿರಂಗಪಡಿಸಲಿದೆಯೇ ಎಂಬ ಬಗ್ಗೆ ಏನನ್ನೂ ಹೇಳಲಿಲ್ಲ.
‘ಸರ್ಕಾರವು ಈಗಾಗಲೇ ಈ ಹೆಸರಿನ ಪಟ್ಟಿಯನ್ನು ಕೋರ್ಟ್ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ ಜೂನ್ ೨೭ರಂದು ಸಲ್ಲಿಸಿದೆ. ಕಾನೂನಿಗೆ ಅನುಗುಣವಾಗಿ ಈ ಸಮಸ್ಯೆಯ ಮೂಲಕ್ಕೆ ಕೈಹಾಕಲು ಸರ್ಕಾರ ಉತ್ಸುಕವಾಗಿದೆ’ ಎಂದರು.