ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲು ಚಿತ್ರಕ್ಕೆ ಬೋಯಪತಿ ಶ್ರೀನು ಆ್ಯಕ್ಷನ್‌–ಕಟ್‌

ಪಂಚರಂಗಿ
Last Updated 26 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

‘ಸನ್‌ ಆಫ್‌ ಸತ್ಯಮೂರ್ತಿ’ ಚಿತ್ರದ ಯಶಸ್ಸಿನ ಖುಷಿ ಅನುಭವಿಸುತ್ತಿರುವ ತೆಲುಗು ಚಿತ್ರರಂಗದ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಬೋಯಪತಿ ಶ್ರೀನು ನಿರ್ದೇಶನ ಮಾಡಲಿದ್ದಾರೆ.

‘ಈ ಚಿತ್ರದಲ್ಲಿ ಅಲ್ಲು ಅರ್ಜುನ್‌ ನಟಿಸುವುದು ಖಚಿತಗೊಂಡಿದೆ. ನಿರ್ದೇಶಕ ಶ್ರೀನು ಈಗ ಚಿತ್ರಕತೆಗೆ ಅಂತಿಮ ಸ್ಪರ್ಶ ನೀಡುವ ಕೆಲಸದಲ್ಲಿ ತೊಡಗಿದ್ದಾರೆ. ಇದು ಇಬ್ಬರು ನಾಯಕಿಯರನ್ನು ಒಳಗೊಂಡಿರುವ ಚಿತ್ರಕತೆಯಾಗಿದೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಅಲ್ಲು ಅರ್ಜುನ್‌ ಹೋಂ ಬ್ಯಾನರ್‌ ‘ಗೀತಾ ಆರ್ಟ್ಸ್‌’ ನಿರ್ಮಾಣ ಮಾಡಲಿದೆ’ ಎಂದಿದ್ದಾರೆ ಅಲ್ಲು ಆಪ್ತರು.

ಇದೇ ಸಂದರ್ಭದಲ್ಲಿ ಅಲ್ಲುಗೆ ಒಪ್ಪುವಂತಹ ನಟಿಯರ ಹುಡುಕಾಟವೂ ನಡೆದಿದೆಯಂತೆ. ಈಚೆಗೆ ತೆರೆಕಂಡ ಬಾಲಿವುಡ್‌ ಸಿನಿಮಾ ‘ಮಿಸ್ಟರ್‌ ಎಕ್ಸ್‌’ ಚಿತ್ರದ ನಟಿ ಅಮೈರಾ ದಸ್ತರ್‌ ಈ ಚಿತ್ರದ ನಾಯಕಿಯರಲ್ಲಿ ಒಬ್ಬರು ಆಗುವ ಸಾಧ್ಯತೆಗಳು ಹೆಚ್ಚಾಗಿದೆ. ಎಸ್‌.ಎಸ್‌.ತಮನ್‌ ಈ ಚಿತ್ರಕ್ಕೆ ಸಂಗೀತ ನಿರ್ದೆಶನ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT