ಆಕಾಶವಾಣಿಯ ‘ಮನದ ಮಾತು’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ರಸ್ತೆ ಸುರಕ್ಷಾ ನೀತಿಯನ್ನು ಶೀಘ್ರ ಜಾರಿಗೆ ತರುವುದಾಗಿ ಹೇಳಿರುವುದು ಸ್ವಾಗತಾರ್ಹ.
ಆದರೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ ಮೊದಲ 50 ಗಂಟೆಗಳವರೆಗೆ ನಗದುರಹಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಅದು ಕೇವಲ 50 ಗಂಟೆಗಳಿಗೆ ಸೀಮಿತವಾಗದೆ ಒಂದು ವಾರದವರೆಗೆ ವಿಸ್ತರಣೆಯಾಗಬೇಕು. ಆಗ ಗಾಯಾಳುಗಳಿಗೆ ಇನ್ನೂ ಹೆಚ್ಚು ಸಹಾಯವಾಗುತ್ತದೆ.