ಐದೂವರೆ ದಶಕಗಳ ಹಿಂದೆ ನಿರಾಶ್ರಿತರಾಗಿ ಭಾರತಕ್ಕೆ ಬಂದ ಟಿಬೆಟನ್ನರಿಗೆ ಪುನರ್ವಸತಿ ಅಂಗವಾಗಿ ನೀಡಿದ್ದ ಅರಣ್ಯ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಿ, ಪಹಣಿ ನೀಡಲು ಸರ್ಕಾರ ತೀರ್ಮಾನಿಸಿದೆ (ಪ್ರ.ವಾ. ನ. 27). ನಮ್ಮ ದೇಶದ ಅನೇಕ ಜನರು ಉಳಲು ಭೂಮಿಯಿಲ್ಲದೆ ಹೆಣಗಾಡುತ್ತಿದ್ದಾರೆ.
ಟಿಬೆಟನ್ನರು ಸಾಕಷ್ಟು ದಶಕಗಳಿಂದ ನಮ್ಮ ದೇಶದಲ್ಲಿ ನೆಲೆಸಿದ್ದಾರೆ. ಆದರೆ, ತಲೆತಲಾಂತರದಿಂದ ಇಲ್ಲಿಯೇ ಹುಟ್ಟಿ, ಇದೇ ಮಣ್ಣಲ್ಲಿಯೇ ಬೆಳೆದು, ಭೂಮಿಗಾಗಿಯೆ ಜೀವನದುದ್ದಕ್ಕೂ ಹೋರಾಟ ಮಾಡುತ್ತಿರುವ ಆದಿವಾಸಿಗಳು ಹಾಗೂ ಬಿಳಿಗಿರಿ ರಂಗನಬೆಟ್ಟದ ಸೋಲಿಗರಿಗೂ ಭೂಮಿಯ ಹಕ್ಕನ್ನು ನೀಡುವುದು ಅಗತ್ಯ.