ದೇಶದ ಇತರ ನದಿಗಳು ಬೇರೆ ಬೇರೆ ರಾಜ್ಯಗಳಿಗೆ ಮತ್ತು ವಿದೇಶಗಳಿಗೆ ಹರಿಯುತ್ತಿಲ್ಲವೇ? ಆ ಪ್ರದೇಶಗಳು ಈ ನದಿಗಳ ನೀರನ್ನು ಬಳಸಿಕೊಂಡು ಜಲಾಶಯ ನಿರ್ಮಾಣ, ವಿದ್ಯುತ್ ಉತ್ಪಾದನೆ ಮಾಡುತ್ತಿಲ್ಲವೇ?
ಗೋವಾ, ಮಹಾರಾಷ್ಟ್ರ, ಕರ್ನಾಟಕ ಸರ್ಕಾರಗಳು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಜನಪರ ತೀರ್ಮಾನ ಕೈಗೊಳ್ಳಬೇಕು. ಆಗ ಭಾವೈಕ್ಯ, ರಾಷ್ಟ್ರೀಯತೆಗೆ ನಿಜವಾದ ಅರ್ಥ ಬರುತ್ತದೆ. ಇದನ್ನು ನ್ಯಾಯಮಂಡಳಿ ಸಹ ಅರಿಯಬೇಕು.