ಸುರಪುರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಲ್ಲಿ ನೀರು ಸರಬರಾಜು ಅಡಿಯಲ್ಲಿ ಅವ್ಯವಹಾರ ನಡೆದಿದೆ. 2013-–14ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಮಾಡಿದ ಕಾರ್ಮಿಕರಿಗೆ ಹಣ ಪಾವತಿಸಬೇಕು ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಈಚೆಗೆ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವೇದಿಕೆಯ ಅಧ್ಯಕ್ಷ ಶಿವಮೋನಯ್ಯ ನಾಯಕ ಮಾತನಾಡಿ, ಜಿಲ್ಲಾ ಪಂಚಾಯಿತಿಯಲ್ಲಿ 2011–-12 ರಿಂದ ಪ್ರಸಕ್ತ ಸಾಲಿನವರೆಗೂ ಕಿರು ನೀರು ಸರಬರಾಜು ಹಾಗೂ ಪೈಪ್ ಲೈನ್ ನೀರು ಸರಬರಾಜು ಕಾಮಗಾರಿ ಮಾಡದೇ ಬೋಗಸ್ ಬಿಲ್ ಪಡೆಯಲಾಗಿದೆ ಎಂದು ಆರೋಪಿಸಿದರು.
ಉಪ ತಹಶೀಲ್ದಾರ್ ನರೇಶ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಭೀಮು ನಾಯಕ ಮಲ್ಲಿಬಾವಿ, ರಮೇಶಗೌಡ ಹೆಗ್ಗನ-ದೊಡ್ಡಿ, ಶ್ರವಣಕುಮಾರ ಡೊಣ್ಣಿಗೇರೆ, ಕೆ. ದೇವಿಂದ್ರಪ್ಪ ನಾಯಕ, ದೇವಿಂದ್ರಪ್ಪ ಹೆಮನೂರು ಇದ್ದರು.