ವದೆಹಲಿ (ಐಎಎನ್ಎಸ್): ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್ ಅವರನ್ನು ಸಿಬಿಐ ಶೀಘ್ರವೇ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
‘ನರಸಿಂಹನ್ ಅವರನ್ನು ಈ ವಾರದಲ್ಲಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ’ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಗೋವಾ ಮಾಜಿ ರಾಜ್ಯಪಾಲ ಬಿ.ವಿ. ವಾಂಚೋ ಮತ್ತು ಪಶ್ಚಿಮ ಬಂಗಾಳದ ಹಿಂದಿನ ರಾಜ್ಯಪಾಲ ಎಂ.ಕೆ. ನಾರಾಯಣನ್ ಅವರ ಬಳಿಕ ನರಸಿಂಹನ್ ಅವರು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ವಿಚಾರಣೆಗೆ ಒಳಪಡುವ ಮೂರನೇ ರಾಜ್ಯಪಾಲ ಎನಿಸಿಕೊಳ್ಳಲಿದ್ದಾರೆ.