ಬೆಂಗಳೂರು: ನಾಯಂಡಹಳ್ಳಿ ಸಮೀಪದ ವಿನಾಯಕ ಲೇಔಟ್ನಲ್ಲಿ ಸೋಮವಾರ ರಾತ್ರಿ ರಾಜು (28) ಮತ್ತು ಕುಮಾರ್ (40) ಎಂಬುವರು ನೇಣು ಹಾಕಿಕೊಂಡಿ-ದ್ದು, ಹೆಣ್ಣೂರು ಬಳಿಯ ವಡ್ಡರಪಾಳ್ಯ-ದಲ್ಲಿ ಫ್ರಾನ್ಸಿಸ್ (53) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿನಾಯಕ ಲೇಔಟ್ ಎರಡನೇ ಅಡ್ಡರಸ್ತೆ ನಿವಾಸಿಯಾದ ರಾಜು, ಕೂಲಿ ಕೆಲಸ ಮಾಡುತ್ತಿದ್ದರು. ಕುಟುಂಬ ಸದಸ್ಯರು ಮಲಗಿದ್ದ ಸಂದ-ರ್ಭದಲ್ಲಿ ಅವರು ಕೊಠಡಿಯೊಂದ-ರಲ್ಲಿ ಆತ್ಮಹತ್ಯೆ ಹಾಕಿಕೊಂಡಿದ್ದಾರೆ.
ಮತ್ತೊಂದು ಪ್ರಕರಣ: ಕುಟುಂಬ ಸದಸ್ಯರೊಂದಿಗೆ ವಿನಾಯಕ ಲೇಔಟ್ ನಾಲ್ಕನೇ ಅಡ್ಡರಸ್ತೆಯಲ್ಲಿ ವಾಸವಾಗಿದ್ದ ಕುಮಾರ್ ಅವರು ಆಟೊ ಚಾಲಕರಾಗಿದ್ದರು. ಮದ್ಯವ್ಯಸನಿಯಾಗಿದ್ದ ಅವರು ಪಾನ ಮತ್ತರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಂದ್ರಾಲೇಔಟ್ ಠಾಣೆಯಲ್ಲಿ ಎರಡೂ ಪ್ರಕರಣಗಳು ದಾಖಲಾಗಿವೆ.
ಹೆಣ್ಣೂರು: ವಡ್ಡರಪಾಳ್ಯದ ಸಾಯಿಬಾಬಾ ಮಂದಿರ ರಸ್ತೆಯಲ್ಲಿ ವಾಸವಾಗಿದ್ದ ಫ್ರಾನ್ಸಿಸ್ ಅವರು ಕೂಲಿ ಕಾರ್ಮಿಕರಾಗಿದ್ದರು.ಅವರು ಮನೆಯ ಸಮೀಪದ ಹಳೆಯ ಕಟ್ಟಡವೊಂದರಲ್ಲಿ ನೇಣು ಹಾಕಿ-ಕೊಂಡಿದ್ದಾರೆ. ಹೆಣ್ಣೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.