ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಚಾಲಕ ಸೇರಿ ಮೂವರ ಆತ್ಮಹತ್ಯೆ

Last Updated 16 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಾಯಂಡಹಳ್ಳಿ ಸಮೀಪದ ವಿನಾಯಕ ಲೇಔಟ್‌ನಲ್ಲಿ ಸೋಮವಾರ ರಾತ್ರಿ ರಾಜು (28) ಮತ್ತು ಕುಮಾರ್‌ (40) ಎಂಬುವರು ನೇಣು ಹಾಕಿಕೊಂಡಿ-ದ್ದು, ಹೆಣ್ಣೂರು ಬಳಿಯ ವಡ್ಡರಪಾಳ್ಯ-ದಲ್ಲಿ ಫ್ರಾನ್ಸಿಸ್‌ (53) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿನಾಯಕ ಲೇಔಟ್‌ ಎರಡನೇ ಅಡ್ಡರಸ್ತೆ ನಿವಾಸಿಯಾದ ರಾಜು, ಕೂಲಿ ಕೆಲಸ ಮಾಡುತ್ತಿದ್ದರು. ಕುಟುಂಬ ಸದಸ್ಯರು ಮಲಗಿದ್ದ ಸಂದ-ರ್ಭದಲ್ಲಿ ಅವರು ಕೊಠಡಿಯೊಂದ-ರಲ್ಲಿ ಆತ್ಮಹತ್ಯೆ ಹಾಕಿಕೊಂಡಿದ್ದಾರೆ.

ಮತ್ತೊಂದು ಪ್ರಕರಣ: ಕುಟುಂಬ ಸದಸ್ಯರೊಂದಿಗೆ ವಿನಾಯಕ ಲೇಔಟ್‌ ನಾಲ್ಕನೇ ಅಡ್ಡರಸ್ತೆಯಲ್ಲಿ ವಾಸವಾಗಿದ್ದ ಕುಮಾರ್‌ ಅವರು ಆಟೊ ಚಾಲಕರಾಗಿದ್ದರು. ಮದ್ಯವ್ಯಸನಿಯಾಗಿದ್ದ ಅವರು ಪಾನ ಮತ್ತರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಂದ್ರಾಲೇಔಟ್‌ ಠಾಣೆಯಲ್ಲಿ ಎರಡೂ ಪ್ರಕರಣಗಳು ದಾಖಲಾಗಿವೆ.

ಹೆಣ್ಣೂರು: ವಡ್ಡರಪಾಳ್ಯದ ಸಾಯಿಬಾಬಾ ಮಂದಿರ ರಸ್ತೆಯಲ್ಲಿ ವಾಸವಾಗಿದ್ದ ಫ್ರಾನ್ಸಿಸ್‌ ಅವರು ಕೂಲಿ ಕಾರ್ಮಿಕರಾಗಿದ್ದರು.ಅವರು ಮನೆಯ ಸಮೀಪದ ಹಳೆಯ ಕಟ್ಟಡವೊಂದರಲ್ಲಿ ನೇಣು ಹಾಕಿ-ಕೊಂಡಿದ್ದಾರೆ. ಹೆಣ್ಣೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT