ಉಳಿಕೆ ಹಣ ಏನಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಅದು ಭ್ರಷ್ಟಾಚಾರ ರೂಪದಲ್ಲಿ ರಾಜಕಾರಣಿಗಳ, ಅಧಿಕಾರಿಗಳ ಜೇಬು ಸೇರುತ್ತಿದೆ.ದೇಶದ ಅಭಿವೃದ್ಧಿಗೆ ವಿನಿಯೋಗ ವಾಗಬೇಕಾದ ಜನರ ತೆರಿಗೆ ಹಣ ಹೀಗೆ ಭ್ರಷ್ಟರ ಜೇಬು ಸೇರುವು ದಾದರೆ ನಾವೇಕೆ ತೆರಿಗೆ ಕಟ್ಟಬೇಕು? ಈ ಪ್ರಶ್ನೆಯನ್ನು ಜನಸಮೂಹ ಸರ್ಕಾರದ ಮುಂದಿಟ್ಟರೆ ಸರ್ಕಾರ ಏನು ಉತ್ತರ ನೀಡಬಲ್ಲದು?
ಆದ್ದರಿಂದ ರಾಜ್ಯ ಸರ್ಕಾರ, ಭ್ರಷ್ಟಾಚಾರ ನಿರ್ಮೂಲನಾ ಆಯೋಗ ಮತ್ತು ಆಡಳಿತ ಸುಧಾ ರಣೆ ಆಯೋಗ ರಚಿಸಿ ವರದಿ ಪಡೆದು ಅದನ್ನು ಜಾರಿಗೆ ತರುವ ಕೆಲಸ ಮಾಡಬೇಕು. ನೌಕರರ ನಿವೃತ್ತಿ ವಯಸ್ಸು ಇಳಿಕೆ, ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ, ಭ್ರಷ್ಟಾಚಾರ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು.