ಕರ್ನಾಟಕ ಲೋಕಾಯುಕ್ತ ರಾಷ್ಟ್ರ ಮಟ್ಟದಲ್ಲಿ ಹೆಸರು ವಾಸಿಯಾಗಿತ್ತು. ಈಗ ಲೋಕಾಯುಕ್ತ ವ್ಯವಸ್ಥೆಯಲ್ಲಿಯೇ ಭ್ರಷ್ಟಾಚಾರ ನುಸುಳಿದೆ ಎಂಬ ಕೂಗು ಎದ್ದಿದೆ. ಇದು, ನಿಜಕ್ಕೂ ಆತಂಕಕಾರಿ. ಇದೇ ನೆಪದಡಿ ಲೋಕಾಯುಕ್ತ ವ್ಯವಸ್ಥೆಯನ್ನು ದುರ್ಬಲಗೊಳಿಸಿದರೆ ಭ್ರಷ್ಟಾಚಾರಿಗಳಿಗೆ ಲಗಾಮು ಹಾಕುವವರೇ ಇಲ್ಲವಾಗುತ್ತಾರೆ. ಆಗ ಖುಷಿಯೋ ಖುಷಿ. ಹಾಗಾಗದಂತೆ ಸರ್ಕಾರ ಎಚ್ಚರ ವಹಿಸಬೇಕು.
ಲೋಕಾಯುಕ್ತದ ಮೇಲೆ ಬಂದಿರುವ ಭ್ರಷ್ಟಾಚಾರ ಆರೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರು ಯಾರೇ ಇರಲಿ, ಅವರಿಗೆ ಶಿಕ್ಷೆಯಾಗುವಂತೆ ಕ್ರಮ ಜರುಗಿಸಬೇಕು. ಇಂತಹ ಆರೋಪಗಳು ಮತ್ತೆ ಎದುರಾಗದಂತೆ ನಿಯಮಗಳನ್ನು ಬಿಗಿಗೊಳಿಸಬೇಕು.