ಮುಂಬೈ (ಪಿಟಿಐ): ಶಿವಸೇನೆಯ ಮುಖ್ಯಸ್ಥ ದಿ. ಬಾಳಾಸಾಹೇಬ್ ಠಾಕ್ರೆ ಉಯಿಲಿಗೆ ಸಂಬಂಧಿಸಿ ಅವರ ಪುತ್ರ ಜೈದೇವ್್ ಸಲ್ಲಿಸಿದ್ದ ಮನವಿ ಮೇಲಿನ ಆದೇಶವನ್ನು ಬಾಂಬೆ ಹೈಕೋರ್ಟ್ ಕಾಯ್ದಿರಿಸಿದೆ.
ಉಯಿಲಿನ ಫಲಾನುಭವಿಗಳು ಕುಟುಂಬದ ಆಸ್ತಿಯನ್ನು ಮಾರಾಟ ಮಾಡುವುದಕ್ಕೆ ಅಥವಾ ವಿಲೇವಾರಿ ಮಾಡುವುದಕ್ಕೆ ತಡೆ ನೀಡಬೇಕೆಂದು ಜಯದೇವ್ ಕೋರಿಕೊಂಡಿದ್ದರು.