ಕಣ್ಣೂರು, ಕೇರಳ (ಪಿಟಿಐ): ಸದಾ ಒಂದಲ್ಲ ಒಂದು ಗಲಭೆಯಿಂದ ಕುಖ್ಯಾತಿ ಪಡೆದಿರುವ ತಲಶೇರಿ ಬಳಿಯ ಕಥಿರೂರಿನಲ್ಲಿ ಆರ್ಎಸ್ಎಸ್ ಕಾರ್ಯಕರ್ತನೊಬ್ಬನನ್ನು ಸೋಮವಾರ ಅಪರಿಚಿತ ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆ.
ಸ್ಥಳೀಯ ಆರ್ಎಸ್ಎಸ್ ಕಾರ್ಯಕರ್ತ ಕೆ. ಟಿ. ಮನೋಜ್ ಎಂಬುವವರನ್ನು ರಸ್ತೆಮಧ್ಯೆ ತಡೆದ ದುಷ್ಕರ್ಮಿಗಳು ಅವರತ್ತ ನಾಡ ಬಾಂಬ್ ಎಸೆದು ನಂತರ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಈ ಕೊಲೆಯ ಹಿಂದೆ ಸಿಪಿಐ ಕೈವಾಡವಿದೆ ಎಂದು ಆಪಾದಿಸಿರುವ ಬಿಜೆಪಿ ಮತ್ತು ಆರ್ಎಸ್ಎಸ್ ಮುಖಂಡರು, ಕೊಲೆಯನ್ನು ಪ್ರತಿಭಟಿಸಿ ಮಂಗಳವಾರ ಕೇರಳ ಬಂದ್ಗೆ ಕರೆ ನೀಡಿದ್ದಾರೆ.