ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳು ಸರ್ಕಾರಕ್ಕೆ ನಿರಾಸೆ ತರುವಂತಿವೆ. ಈ ಯೋಜನೆಯಿಂದಾಗಿ ಕಾರ್ಮಿಕರ ಸಮಸ್ಯೆ ಉಂಟಾಗಿದೆ ಎಂಬ ದೂರು ಇದೆ. ಹೀಗೆ ದೊರಕಿದ ಅಕ್ಕಿಯನ್ನು ಕೆ.ಜಿಗೆ ₹14 ರಿಂದ15ಕ್ಕೆ ಜನ ಮಾರಿಕೊಳ್ಳುತ್ತಿದ್ದಾರೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ಬಸವ ಜಯಂತಿ ಸಂದರ್ಭದಲ್ಲಿ ಮುಖ್ಯಮಂತ್ರಿ, ಬಸವಣ್ಣನವರ ‘ಕಾಯ ಕವೇ ಕೈಲಾಸ’ ಎಂಬ ಮಾತನ್ನು ಜನರಿಗೆ ನೆನಪಿಸಿಕೊಟ್ಟಿ ದ್ದಾರೆ. ಆದರೆ ಸರ್ಕಾರದ ಯೋಜನೆಯನ್ನು ದುರುಪ ಯೋಗಪಡಿಸಿಕೊಂಡು ಸೋಮಾರಿತನಕ್ಕೆ ಮಾರು ಹೋದ ವರಿಗೆ ‘ಸೋಮಾರಿತನವೇ ಕೈಲಾಸ’ ಎಂಬಂತಾಗಿದೆ.
– ಕೆ.ವಿ.ಸೀತಾರಾಮಯ್ಯ, ಹಾಸನ