ಹಿಸ್ಸಾರ್ (ಪಿಟಿಐ): ಬರ್ವಾಲಾ ಪಟ್ಟಣದ 12 ಎಕರೆ ವಿಸ್ತೀರ್ಣದ ರಾಮ್ಪಾಲ್ ಆಶ್ರಮದಲ್ಲಿ ಸಂಗ್ರಹಿಸಿ ಇಡಲಾಗಿದ್ದ 15 ಲಾಠಿ, ಮೂರು ಕೆ.ಜಿ. ಖಾರದಪುಡಿ, 12 ಹೆಲ್ಮೆಟ್ ಹಾಗೂ 500 ಚಿಕ್ಕ ಗಾತ್ರದ ಕಲ್ಲುಗಳನ್ನು ಹರಿಯಾಣ ಪೊಲೀಸರ ವಿಶೇಷ ತನಿಖಾ ತಂಡ ವಶಪಡಿಸಿಕೊಂಡಿದೆ.
ತನಿಖಾ ತಂಡ ಆಶ್ರಮವನ್ನು ಜಾಲಾಡುತ್ತಿದ್ದು ಇನ್ನೂ ಕೆಲವು ದಿನಗಳ ಕಾಲ ತಪಾಸಣೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಪೊಲೀಸರೊಂದಿಗೆ ಕಾದಾಟಕ್ಕಿಳಿದ ರಾಮ್ಪಾಲ್ ಪ್ರಮುಖ ಬಂಟರನ್ನು ಸ್ಥಳೀಯ ನ್ಯಾಯಾಲಯ ಎರಡು ದಿನಗಳವರೆಗೆ ಪೊಲೀಸರ ವಶಕ್ಕೆ ನೀಡಿದೆ.