ಕನಕಗಿರಿ: ಇಲ್ಲಿನ ಗ್ರಾಮ ಪಂಚಾಯಿತಿಗೆ ಮಂಜೂರು ಆಗಿರುವ ಇಂದಿರಾ ಆವಾಸ್ ಯೋಜನೆ ಮನೆಗಳು ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎನ್ನುವಂತಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಟೀಕಿಸಿದರು.
ಇಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಮನೆ ಹಂಚಿಕೆಗೆ ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಭೆಯಲ್ಲಿ ಸದಸ್ಯರಾದ ಸುಭಾಸ, ಸಣ್ಣಕನಕಪ್ಪ, ರಾಜಾಸಾಬ ನಂದಾಪುರ, ಲಿಂಗರಾಜ, ಶಿವಕುಮಾರ ಕೋರಿಶೆಟ್ರ ಮಾತನಾಡಿ., ಬರೀ 42 ಮನೆಗಳು ಮಂಜೂರಾಗಿದ್ದು 11 ವಾರ್ಡ್ಗೆ ಹೇಗೆ ಹಂಚಿಕೆ ಮಾಡುವುದು ಎಂದು ಪ್ರಶ್ನಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಕಡಿವಾಳರ ಮಾತನಾಡಿ, ಜನಗಣತಿ ಆಧಾರದ ಮೇಲೆ ಮನೆಗಳು ಮಂಜೂರಾಗಿವೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಗಮ್ಮ ನಾಯಕ ಅಧ್ಯಕ್ಷತೆ ವಹಿಸಿದ್ದರು.