ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸೇವಾ ನಿಯಮಾವಳಿಗೆ ಅನುಗುಣವಾಗಿ ನೌಕರರು ತಾವು ಮಾಡಿರುವ ಸಾಲ, ಗಳಿಸಿರುವ ಸಂಪತ್ತು ಕುರಿತು ವಿವರವಾದ ಮಾಹಿತಿಯನ್ನು ಪ್ರತಿ ಆರ್ಥಿಕ ವರ್ಷದ ಕೊನೆಯಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಿರುತ್ತದೆ. ‘ಡಿ’ ದರ್ಜೆ ನೌಕರರು ಪ್ರಾಮಾಣಿಕರು ಆಥವಾ ಅವರಿಗೆ ನೀತಿ ನಿರೂಪಣೆಯಲ್ಲಿ ಗಣನೀಯ ಪಾತ್ರವಿಲ್ಲ ಎಂಬ ಕಾರಣಕ್ಕೋ ಏನೋ ಈ ನೌಕರರು ತಮ್ಮ ವಾರ್ಷಿಕ ವರದಿ ಸಲ್ಲಿಸುವುದರಿಂದ ಇದುವರೆಗೆ ವಿನಾಯಿತಿ ನೀಡಲಾಗಿದೆ.