ಬೆಂಗಳೂರು: ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯವು ಆ.1 ಮತ್ತು 2ರಂದು ‘ಕಂಪ್ಯೂಟಿಂಗ್, ಮಾಹಿತಿ ಸಂವಹನ ಮತ್ತು ಅನ್ವಯಿಕೆ’ ವಿಷಯದ ಕುರಿತು ಅಂತರರಾಷ್ಟೀಯ ವಿಚಾರ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ’ ಎಂದು ಸಂಸ್ಥೆ ಪ್ರಾಂಶುಪಾಲ ಡಾ.ಎಚ್. ನಾಗರಾಜ್ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂತರರಾಷ್ಟ್ರೀಯ ಸಮ್ಮೇಳನವನ್ನು ಕಂಪ್ಯೂಟರ್ ಸೈನ್ಸ್ ಮತ್ತು ಎಂ.ಸಿ.ಎ ವಿಭಾಗಗಳು ಜಂಟಿಯಾಗಿ ನಡೆಸುತ್ತಿದೆ’ ಎಂದರು. ‘ಸಮ್ಮೇಳನದಲ್ಲಿ ಸಂಶೋಧಕರು, ಎಂಜಿನಿಯರುಗಳು, ವಿಜ್ಞಾನಿಗಳು, ಶಿಕ್ಷಣ ತಜ್ಞರು ಮತ್ತು ತಾಂತ್ರಿಕರಿಗೆ ಅಂತರ್– ಶಾಸ್ತ್ರೀಯ ಅಧ್ಯಯನವನ್ನು ಒದಗಿಸುವ ವೇದಿಕೆಯಾಗಿದೆ. ಸಂಶೋಧನೆ ವಿಷಯಕ್ಕೆ ಸಂಬಂಧಿಸಿದಂತೆ 850 ಕ್ಕಿಂತ ಹೆಚ್ಚು ಲೇಖನಗಳು ಬಂದಿದ್ದು, ಅವುಗಳನ್ನು ತಜ್ಞರ ಸಮಿತಿ ಸದಸ್ಯರು ಪರಿಶೀಲಿಸಿ, ಗುಣಮಟ್ಟದ ಸಂಶೋಧನೆಯ ಆಧಾರದ ಮೇಲೆ ಕೆಲ ಲೇಖನಗಳನ್ನು ಸಮ್ಮೇಳನದಲ್ಲಿ ಮಂಡಿಸಲಾಗುವುದು ಎಂದರು.
‘ಸಮ್ಮೇಳನಕ್ಕೆ 3ರಿಂದ 4 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ’ ಎಂದು ಸ್ಪಷ್ಟಪಡಿಸಿದರು.