ನವದೆಹಲಿ (ಐಎಎನ್ಎಸ್): ಖ್ಯಾತ ಇತಿಹಾಸ ತಜ್ಞ ತಪನ್ ರಾಯ್ ಚೌಧರಿ ಅವರು ಶುಕ್ರವಾರ ನಿಧನರಾಗಿದ್ದಾರೆ. ಇವರು ಭಾರತ–ಆಂಗ್ಲ ಇತಿಹಾಸ, ಭಾರತದ ಆರ್ಥಿಕ ಇತಿಹಾಸ ಹಾಗೂ ಬಂಗಾಳದ ಇತಿಹಾಸದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು.
ಇತಿಹಾಸಕ್ಕೆ ಇವರ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿತ್ತು. ತಪನ್ ಅವರ ನಿಧನಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಸಂತಾಪ ಸೂಚಿಸಿದ್ದಾರೆ.