ಬೆಂಗಳೂರು (ಐಎಎನ್ಎಸ್/ಪಿಟಿಐ): ಭಾರತವು ಅನ್ಯಗ್ರಹ ಯಾನದಲ್ಲಿ ಇತಿಹಾಸ ಬರೆಯಲು ಉಳಿದಿರುವುದು ಇನ್ನೊಂದೇ ಹೆಜ್ಜೆಯಷ್ಟೆ. ಹೌದು, ಬಾಕಿ ಇರುವುದು ಒಂದೇ ಹೆಜ್ಜೆ. ಆದರೆ ಅದು ಅತ್ಯಂತ ಮಹತ್ವದ ಹೆಜ್ಜೆ! ಭಾರತವಷ್ಟೇ ಏಕೆ, ಇಡೀ ಜಗತ್ತಿನ ಕೋಟ್ಯಂತರ ಜನರ ನಿರೀಕ್ಷೆ, ಕುತೂಹಲ, ಆತಂಕಗಳೆಲ್ಲಾ ಮಡುವುಗಟ್ಟಿರುವ ಹೆಜ್ಜೆ ಅದು!
ಎಲ್ಲಾ ಅಂದುಕೊಂಡಂತೆ ನಡೆದರೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೊ’ ಉಡಾಯಿಸಿರುವ ಮಂಗಳನೌಕೆ ಬುಧವಾರ (ಸೆ.೨೪) ಬೆಳಿಗ್ಗೆ ೭.೫೩ರ ಸುಮಾರಿಗೆ ಕೆಂಪುಕಾಯದ ಕಕ್ಷೆಗೆ ಸೇರಲಿದೆ.