ಲೋಕಾಯುಕ್ತ ಕಚೇರಿಯಲ್ಲಿ ಇಂತಹ ಕೆಲಸ ನಡೆಯುತ್ತಿದ್ದರೂ ಅಲ್ಲಿಯ ನಿಷ್ಠಾವಂತ ಅಧಿಕಾರಿಗಳಿಗೂ ಸುಳಿವು ಸಿಕ್ಕಿಲ್ಲ ಎನ್ನುವುದು ಮತ್ತು ಕೆಲವು ವಕೀಲರಿಗೆ ಸ್ಪಷ್ಟ ಸುಳಿವಿದ್ದರೂ ಅವರು ಇಷ್ಟು ದಿನ ಮೌನಪ್ರೇಕ್ಷಕರಾಗಿದ್ದುದು ಅಯೋಮಯ ಎನಿಸುತ್ತದೆ.
ಸಾವಿಲ್ಲದ ಮನೆಯಿಂದ ಸಾಸಿವೆ ತರುವುದು ಹೇಗೆ ಅಸಾಧ್ಯವೋ ಹಾಗೆಯೇ ಭ್ರಷ್ಟರಲ್ಲದ ಮನುಷ್ಯರೇ ಇಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ. ಈ ಬಗ್ಗೆ ಇಡೀ ಸಮಾಜ ಗಂಭೀರವಾಗಿ ಚರ್ಚಿಸಬೇಕಾಗಿದೆ.