ಅಕ್ರಮವಾಗಿ ಹಣ ಸಂಗ್ರಹಿಸುವವರ ಮತ್ತು ಅದನ್ನು ಲೇವಾದೇವಿ ವ್ಯವಹಾರಕ್ಕೆ ಬಳಸುವವರ ಬಗ್ಗೆ ಚುನಾವಣಾ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ, ದಾಳಿ ನಡೆಸಿ ಹಣ ವಶ ಪಡಿಸಿಕೊಳ್ಳುತ್ತಾರೆ. ಲೋಕಾಯುಕ್ತದ ಅಧಿಕಾರಿಗಳು ಕೂಡ ಆಗೊಮ್ಮೆ ಈಗೊಮ್ಮೆ ದಾಳಿ ನಡೆಸಿ, ಅಕ್ರಮ ಸಂಪತ್ತನ್ನು ಬಯಲಿಗೆಳೆಯುತ್ತಾರೆ. ಇವರ ಗಮನಕ್ಕೆ ಬರುವ ಅಕ್ರಮ ವ್ಯವಹಾರ ಆದಾಯ ಕರ ಇಲಾಖೆಯ ಗಮನಕ್ಕೆ ಯಾಕೆ ಬರುವುದಿಲ್ಲ?
ಹಾಡಹಗಲೇ ಲೂಟಿ ಹೊಡೆಯುವವರು, ರಾತ್ರಿ ಬೆಳಗಾಗುವುದರೊಳಗೆ ಶ್ರೀಮಂತರಾದವರನ್ನು ಆದಾಯ ಕರ ಇಲಾಖೆಯವರು ಯಾಕೆ ಪ್ರಶ್ನಿಸುವುದಿಲ್ಲ?
ಇಂತಹ ಕುಳಗಳನ್ನು ಬಲಿ ಹಾಕಲು ವಿಶೇಷ ಬುದ್ಧಿವಂತಿಕೆ ಬೇಡ. ನಿಶ್ಚಿತ ಆದಾಯ ಹೊಂದಿದವರು ಪ್ರತಿ ವರ್ಷ ಕಡ್ಡಾಯವಾಗಿ ತಮ್ಮ ಆದಾಯ ಬಹಿರಂಗಪಡಿಸಬೇಕು. ಇಲ್ಲದಿದ್ದರೆ ಶಿಕ್ಷೆ ಖಚಿತ. ಹಾಗಿರುವಾಗ ಅಕ್ರಮ ಸಂಪತ್ತು ಕೂಡುಹಾಕುವವರಿಗೆ ಯಾಕೆ ರಿಯಾಯ್ತಿ ?