ನವದೆಹಲಿ (ಪಿಟಿಐ): ರದ್ದುಗೊಂಡಿದ್ದ ಕಲ್ಲಿದ್ದಲು ನಿಕ್ಷೇಪಗಳ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿರುವ ಕೇಂದ್ರ ಸರ್ಕಾರ, ಮೊದಲ ಹೆಜ್ಜೆಯಾಗಿ 24 ನಿಕ್ಷೇಪಗಳ ಇ–ಹರಾಜು ಪೋರ್ಟಲ್ ಪ್ರಾರಂಭಿಸಿದೆ.
ಗಣಿ ಹಂಚಿಕೆಗೆ ಸಂಬಂಧಿಸಿದಂತೆ ಕಲ್ಲಿದ್ದಲು ಸುಗ್ರೀವಾಜ್ಞೆ ಮತ್ತು ಅಗತ್ಯ ಮಾರ್ಗದರ್ಶಿ ಸೂತ್ರಗಳಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ಸೂಚಿಸಿತು.
ಇದರಿಂದ ಕಲ್ಲಿದ್ದಲು ನಿಕ್ಷೇಪಗಳಿರುವ ರಾಜ್ಯಗಳಿಗೆ ಮುಂದಿನ 30 ವರ್ಷ ರೂ 7 ಲಕ್ಷ ಕೋಟಿ ಸಮಷ್ಟಿ ನಿಧಿ ದೊರಕಲಿದೆ. ಇಡೀ ಹರಾಜು ಪ್ರಕ್ರಿಯೆ ಪಾರದರ್ಶಕ, ಪ್ರಾಮಾಣಿಕವಾಗಿ ಆನ್ಲೈನ್ ಮೂಲಕ ನಡೆಯಲಿದೆ ಎಂದು ಇ– ಹರಾಜು ಪೋರ್ಟಲ್ಗೆ (www. mstcecommerce.com/auctionhome/coalblock) ಚಾಲನೆ ನೀಡಿದ ಇಂಧನ ಸಚಿವ ಪಿಯೂಷ್ ಗೋಯಲ್ ತಿಳಿಸಿದರು.
‘ಕೆವೈಸಿ ನಿಯಮಾವಳಿಗಳಿಗೆ ಅನುಗುಣವಾಗಿ ನೋಂದಣಿ ಪ್ರಕ್ರಿಯೆ ಪ್ರಾರಂಭಗೊಂಡಿದೆ’ ಎಂದು ಅವರು ಹೇಳಿದರು.