ವಘೇಲಾ ಅವರ ಈ ಹೇಳಿಕೆಯು ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
‘ಅಡ್ವಾಣಿ ಅವರು ರಥಯಾತ್ರೆ ನಡೆಸಿದಾಗ ಬಿಜೆಪಿ ಅತ್ಯಧಿಕ ಕ್ಷೇತ್ರಗಳನ್ನು ಗೆದ್ದಿತ್ತು. ಆದರೆ ಆಗ ಅಧಿಕಾರಕ್ಕೆ ಬಂದುದು ಎನ್ಡಿಎ ಮೈತ್ರಿಕೂಟವಾದ್ದರಿಂದ ಪ್ರಧಾನಿಯಾಗಿದ್ದ ವಾಜಪೇಯಿ ಅವರು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿತ್ತು.
ಈಗ ಬಿಜೆಪಿ ಸ್ವಂತ ಬಲದಿಂದಲೇ ಬಹುಮತ ಪಡೆದಿದೆ. ಮಂದಿರ ನಿರ್ಮಾಣಕ್ಕೆ ಎನ್ಡಿಎ ಕೂಡ ಒಪ್ಪುವುದಾದರೆ ಒಳ್ಳೆಯದೇ. ಇಲ್ಲದಿದ್ದರೆ ಬಿಜೆಪಿಯು ಸಾಂವಿಧಾನಿಕ ನೀತಿನಿಯಮಗಳಡಿ ರಾಮಮಂದಿರ ನಿರ್ಮಿಸಬೇಕು’ ಎಂದು ಅವರು ಹೇಳಿದರು.