ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ನಿದ್ರೆ ಸರಿಯೇ?

ಅಕ್ಷರ ಗಾತ್ರ

ಸಂಕಷ್ಟಕ್ಕೆ ಸಿಲುಕಿರುವ ರೈತರು  ಆತ್ಮಹತ್ಯೆಗೆ  ಶರಣಾಗುತ್ತಿರುವುದು ನೋವಿನ ಸಂಗತಿ. ರೈತರ ಕಷ್ಟಗಳ ಬಗ್ಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಮಹತ್ವದ ಚರ್ಚೆ ಆಗುತ್ತಿದ್ದ ವೇಳೆ ಕೆಲವು ಶಾಸಕರು, ಸಚಿವರು,  ಮತ್ತು ಮುಖ್ಯಮಂತ್ರಿ ಸುಖಾಸನಗಳ ಮೇಲೆ ನಿದ್ದೆಗೆ ಜಾರಿದ್ದ ದೃಶ್ಯಗಳು ಟಿ.ವಿ. ಚಾನೆಲ್‌ಗಳಲ್ಲಿ ನೇರ ಪ್ರಸಾರ ಕಂಡವು.  ಈ ದೃಶ್ಯಗಳನ್ನು ನೋಡಿದಾಗ ನಿಜಕ್ಕೂ ಬೇಸರವಾಯಿತು. ಬಳಲಿಕೆ ಆದಾಗ ನಿದ್ದೆ ಹತ್ತುವುದು ಸಹಜ. ಆದರೆ  ಅನ್ನದಾತನ ಸಮಸ್ಯೆಗಳ ಬಗ್ಗೆ ಚರ್ಚೆ ಆಗುತ್ತಿದ್ದಾಗ ನಿದ್ದೆಗೆ ಜಾರುವುದು ಸರಿಯಾದ ಸಂದೇಶವನ್ನು ರವಾನಿಸುವುದಿಲ್ಲ. ನಾಯಕರೆನಿಸಿಕೊಂಡವರು ಈ ಸೂಕ್ಷ್ಮ ಅರಿತು ನಡೆಯಬೇಕು. ನಿದ್ದೆ ಸನಿಹ ಸುಳಿಯದಂತೆ ಎಚ್ಚರ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT