ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರೊಂದಿಗೆ ಗುಂಡಿನ ಚಕಮಕಿ: ಮೇಜರ್‌ ಸಾವು

Last Updated 25 ಏಪ್ರಿಲ್ 2014, 20:02 IST
ಅಕ್ಷರ ಗಾತ್ರ

ಶ್ರೀನಗರ: ದಕ್ಷಿಣ ಶೋಪಿಯಾನ್‌ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಬೆಂಗಳೂರು ಮೂಲದ ಒಬ್ಬ ಮೇಜರ್‌ ಸೇರಿದಂತೆ ಇಬ್ಬರು ಸೈನಿಕರು ಮತ್ತು ಮೂವರು ಉಗ್ರರು ಮೃಪಟ್ಟಿದ್ದಾರೆ. ೪೪ನೇ ರಾಷ್ಟ್ರೀಯ ರೈಫಲ್ಸ್‌ನ ಮೇಜರ್  ಮುಕುಂದ್  ವರದ­ರಾಜನ್‌ ಮೃತಪಟ್ಟಿದ್ದು, ಇವರು ಬೆಂಗಳೂರಿನವರು.

‘ಗುಂಡಿನ ಕಾಳಗ ನಡೆದ ನಂತರ ಸೈನ್ಯದ ಜಂಟಿ ತಂಡವು ಉಗ್ರರ ಹುಡುಕಾಟ ನಡೆಸುತ್ತಿದ್ದಾಗ ಪೊದೆ­ಯಿಂದ ಹೊರಬಂದ ಉಗ್ರನೊಬ್ಬ ಮನಸ್ಸಿಗೆ ಬಂದಂತೆ ಗುಂಡು ಹಾರಿಸಿ­ದ್ದಾನೆ. ಈ ಸಂದರ್ಭದಲ್ಲಿ ಮೇಜರ್‌ ಹಾಗೂ ಇಬ್ಬರು ಸೈನಿಕರು ಗಾಯ­ಗೊಂಡರು.

ಶೋಧ ಕಾರ್ಯಾ­ಚರಣೆ ನಡೆಸುತ್ತಿ­ರುವಾಗ ಶೋಪಿ­ಯಾನ್‌  ಕರೆವಾ ಮನ್ಲು ಎಂಬ ಸ್ಥಳದಲ್ಲಿ ಅವಿತಿಟ್ಟು­ಕೊಂಡಿದ್ದ ಉಗ್ರರು ಈ ದಾಳಿ ನಡೆಸಿದ್ದಾರೆ. ಸೈನಿಕ ಕಾರ್ಯಾಚರಣೆ­ಯನ್ನು ರಾತ್ರಿ ವೇಳೆ ನಿಲ್ಲಿಸಲಾಗಿದ್ದು ಈ ಸ್ಥಳದಿಂದ ಉಗ್ರರು ತಪ್ಪಿಸಿಕೊಳ್ಳ­ದಂತೆ ಬಿಗಿ ಭದ್ರತೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT