ಶ್ರೀನಗರ: ದಕ್ಷಿಣ ಶೋಪಿಯಾನ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಬೆಂಗಳೂರು ಮೂಲದ ಒಬ್ಬ ಮೇಜರ್ ಸೇರಿದಂತೆ ಇಬ್ಬರು ಸೈನಿಕರು ಮತ್ತು ಮೂವರು ಉಗ್ರರು ಮೃಪಟ್ಟಿದ್ದಾರೆ. ೪೪ನೇ ರಾಷ್ಟ್ರೀಯ ರೈಫಲ್ಸ್ನ ಮೇಜರ್ ಮುಕುಂದ್ ವರದರಾಜನ್ ಮೃತಪಟ್ಟಿದ್ದು, ಇವರು ಬೆಂಗಳೂರಿನವರು.
‘ಗುಂಡಿನ ಕಾಳಗ ನಡೆದ ನಂತರ ಸೈನ್ಯದ ಜಂಟಿ ತಂಡವು ಉಗ್ರರ ಹುಡುಕಾಟ ನಡೆಸುತ್ತಿದ್ದಾಗ ಪೊದೆಯಿಂದ ಹೊರಬಂದ ಉಗ್ರನೊಬ್ಬ ಮನಸ್ಸಿಗೆ ಬಂದಂತೆ ಗುಂಡು ಹಾರಿಸಿದ್ದಾನೆ. ಈ ಸಂದರ್ಭದಲ್ಲಿ ಮೇಜರ್ ಹಾಗೂ ಇಬ್ಬರು ಸೈನಿಕರು ಗಾಯಗೊಂಡರು.
ಶೋಧ ಕಾರ್ಯಾಚರಣೆ ನಡೆಸುತ್ತಿರುವಾಗ ಶೋಪಿಯಾನ್ ಕರೆವಾ ಮನ್ಲು ಎಂಬ ಸ್ಥಳದಲ್ಲಿ ಅವಿತಿಟ್ಟುಕೊಂಡಿದ್ದ ಉಗ್ರರು ಈ ದಾಳಿ ನಡೆಸಿದ್ದಾರೆ. ಸೈನಿಕ ಕಾರ್ಯಾಚರಣೆಯನ್ನು ರಾತ್ರಿ ವೇಳೆ ನಿಲ್ಲಿಸಲಾಗಿದ್ದು ಈ ಸ್ಥಳದಿಂದ ಉಗ್ರರು ತಪ್ಪಿಸಿಕೊಳ್ಳದಂತೆ ಬಿಗಿ ಭದ್ರತೆ ಮಾಡಲಾಗಿದೆ.