ಶನಿವಾರ ಇಲ್ಲಿ ನಡೆದ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಭಾರತದ ಯುವಕರು ಭಯೋತ್ಪಾದಕ ಸಂಘಟನೆಗಳ ಆಕರ್ಷಿತರಾಗುತ್ತಿದ್ದಾರೆ ಎನ್ನುವುದು ಲಘುವಾದ ವಿಷಯವಲ್ಲ. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರಕ್ಕೆ ಇದು ಸವಾಲು ಎಂದು ಅವರು ಹೇಳಿದರು.
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಐಎಸ್’ ಉಗ್ರ ಸಂಘಟನೆ ತೊರೆದು ಇರಾಕ್ನಿಂದ ವಾಪಸ್ ಬಂದ ಮುಂಬೈನ ಕಲ್ಯಾಣ್ ಮೂಲದ ಯುವಕ ಅರೀಫ್ ಮಜೀದ್ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಿಚಾರಣೆಗೆ ಒಳಪಡಿಸುತ್ತಿದೆ ಎಂದರು. ತನಿಖೆ ನೆಪದಲ್ಲಿ ಕಿರುಕುಳ ನೀಡುತ್ತಿಲ್ಲ ಎಂದೂ ಅವರು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.
ಆಲ್ ಖೈದಾ ಭಯೋತ್ಪಾದನೆ ಸಂಘಟನೆ ಭಾರತದಲ್ಲಿ ‘ಖೈದಾ–ಉಲ್–ಜಿಹಾದ್’ ಎಂಬ ಘಟಕ ಪ್ರಾರಂಭಿಸುವುದಾಗಿ ಬೆದರಿಕೆ ಒಡ್ಡಿದೆ. ಬಾಂಗ್ಲಾದೇಶ, ಅಸ್ಸಾಂ, ಗುಜರಾತ್, ಜಮ್ಮು– ಕಾಶ್ಮೀರ ಸೇರಿದಂತೆ ದೇಶದ ಇತರೆ ನಗರಗಳನ್ನು ತನ್ನ ಕಾರ್ಯಾಚರಣೆ ವ್ಯಾಪ್ತಿಗೆ ತರುವುದು ಇದರ ಉದ್ದೇಶ. ಆದರೆ, ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಿಂಗ್ ಹೇಳಿದರು.