ನವದೆಹಲಿ (ಪಿಟಿಐ): ‘ಉತ್ತಮ ಆಡಳಿತ ದಿನ’ ಆಚರಣೆಗಾಗಿ ಈ 25ರಂದು ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಶಾಲೆಗಳು ತೆರೆದಿರುತ್ತವೆ ಎಂಬ ‘ಮಾಧ್ಯಮ ವರದಿಗಳು ಆಧಾರರಹಿತ ಮತ್ತು ತಪ್ಪು ಮಾಹಿತಿಯಿಂದ ಕೂಡಿವೆ’ ಎಂದು ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಸೋಮವಾರ ಇಲ್ಲಿ ಟೀಕಿಸಿದರು.
‘ವಿವಾದ ಹುಟ್ಟುಹಾಕುವ ಉದ್ದೇಶದಿಂದಲೇ ಇಂತಹ ತಪ್ಪು ಮಾಹಿತಿಗಳನ್ನು ಒಳಗೊಂಡ ವರದಿಗಳನ್ನು ಪ್ರಕಟಿಸುತ್ತಿರುವುದು ದುರದೃಷ್ಟಕರ’ ಎಂದು ಅವರು ಅಸಮಾಧಾನ ತೋರಿದರು.
ಕ್ರಿಸ್ಮಸ್ ಆಚರಣೆಗಾಗಿ ಶಾಲಾ ಕಾಲೇಜುಗಳಿಗೆ ರಜೆ ಇರುತ್ತದೆ. ಅಂದು ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಈ ಬಗ್ಗೆ ತಮ್ಮ ಇಲಾಖೆಯು ಅಧಿಕೃತ ಪ್ರಕಟಣೆ ಹೊರಡಿಸಲಿದೆ ಎಂದು ಅವರು ಸಂಸತ್ ಭವನದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
‘ನಾನು ಸದಾ ಸಮಜಾಯಿಸಿ ನೀಡುತ್ತಿರಬೇಕು ಎನ್ನುವುದೇ ಇದರ ಉದ್ದೇಶವಾಗಿರಬೇಕು’ ಎಂದೂ ಹೇಳಿದರು.
*ಸಂಸತ್ನಲ್ಲಿ ಭಾರಿ ಕೋಲಾಹಲ, ಸರ್ಕಾರ ನಿರಾಕರಣೆ