ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನ ಸ್ವಚ್ಛಗೊಳಿಸಿ

ಅಕ್ಷರ ಗಾತ್ರ

ಜಯನಗರ ಮೊದಲನೇ ಹಂತದಲ್ಲಿನ ಮಾಧವನ್‌ ಪಾರ್ಕ್‌ನ ಪೂರ್ವಭಾಗವು ಪೂರ್ತಿ ತಿಪ್ಪೆಗುಂಡಿಯಾಗಿ ಬದಲಾಗಿದೆ. ಸ್ಥಳೀಯ ನಿವಾಸಿಗಳು ಕಸವನ್ನೆಲ್ಲ ಇಲ್ಲಿಯೇ ಎಸೆಯುತ್ತಿರುವುದರಿಂದ ಪಾರ್ಕ್‌ನ ಪೂರ್ವಭಾಗ ಪೂರ್ತಿಯಾಗಿ ಅಂದಗೆಟ್ಟು ವಿರೂಪಗೊಂಡಿದೆ.

ಇತ್ತೀಚೆಗೆ ಕೆಲವು ಸಂಸ್ಥೆಗಳು ಸ್ವಚ್ಛಭಾರತ್‌ ಆಂದೋಲನದ ಅಂಗವಾಗಿ ಈ ಭಾಗದಲ್ಲಿ ಕಸವನ್ನು ಚೆಲ್ಲದಂತೆ ಸ್ಥಳೀಯರಿಗೆ ಅರಿವು ಮೂಡಿಸಿರುವುದೂ ಅಲ್ಲದೇ ಅಲ್ಲಿ ಈ ಕುರಿತು ಫಲಕವನ್ನೂ ಹಚ್ಚಿದ್ದಾರೆ. ಆದರೆ ಇದರಿಂದ ಕಸವನ್ನು ಚೆಲ್ಲುವುದು ನಿಂತಿದ್ದರೂ ಹಿಂದೆ ಚೆಲ್ಲಿದ್ದ ಕಸ ಹಾಗೆಯೇ ಉಳಿಸಿದೆ. ಆದ್ದರಿಂದ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳು ಇತ್ತ ಗಮನಹರಿಸಿ ಅಲ್ಲಿನ ಕಸವನ್ನು ಸರಿಯಾದ ಸ್ಥಳಕ್ಕೆ ವಿಲೇವಾರಿ ಮಾಡಿಸಬೇಕು ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT