ನವದೆಹಲಿ (ಪಿಟಿಐ): ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮಂಗಳವಾರ ನೂರು ದಿನಗಳನ್ನು ಪೂರೈಸಲಿದೆ. ‘ನೂರು ದಿನಗಳಲ್ಲಿ ಕೋಮುಗಲಭೆ ಪ್ರಕರಣಗಳ ಸಂಖ್ಯೆ ಹೆಚ್ಚಳವಾದರೂ ಪ್ರಧಾನಿ ಮೌನ ವಹಿಸಿದ್ದಾರೆ’ ಎಂದು ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಲೇವಡಿ ಮಾಡಿವೆ.
ಎನ್ಡಿಎ ಸಾಧನೆ ಪರಾಮರ್ಶೆಗೆ ಸೋಮವಾರ ಹಮ್ಮಿಕೊಳ್ಳಲಾಗಿದ್ದ ‘ವಾದಾ ನ ತೋಡ್’ ಅಭಿಯಾನದಲ್ಲಿ ವಿವಿಧ ಪಕ್ಷಗಳು ಭಾಗವಹಿಸಿದ್ದವು.