ಬೆಂಗಳೂರು: ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಲ್.ಸಿ.ನಾಗರಾಜ್ ಅವರ ವರ್ಗಾವಣೆಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮಧ್ಯಂತರ ತಡೆ ನೀಡಿದೆ.
ಮಂಡಳಿಯ ಹಂಗಾಮಿ ಅಧ್ಯಕ್ಷ ಅಭಿಜಿತ್ ದಾಸ್ಗುಪ್ತಾ ಹಾಗೂ ನ್ಯಾಯಾಂಗ ಸದಸ್ಯ ಮೂಸಾ ಕುಂಞ ನಾಯರ್ಮೂಲೆ ಅವರಿದ್ದ ವಿಭಾಗೀಯ ಪೀಠವು ಸೋಮವಾರ ಅರ್ಜಿ ವಿಚಾರಣೆ ನಡೆಸಿತು.
‘ಇದು ನಿಗದಿತ ಅವಧಿಗೂ ಮುನ್ನ ಮಾಡಲಾಗಿರುವ ವರ್ಗಾವಣೆ’ ಎಂಬ ಅರ್ಜಿದಾರರ ವಾದವನ್ನು ನ್ಯಾಯಪೀಠವು ಪುರಸ್ಕರಿಸಿ ತಡೆ ನೀಡಿತು.
ಅರ್ಜಿದಾರರ ಪರ ಎ.ವಿಶ್ವನಾಥ ಭಟ್ ವಕಾಲತ್ತು ವಹಿಸಿದ್ದರು.
ನಾಗರಾಜ್ ಅವರನ್ನು ಇತ್ತೀಚೆಗಷ್ಟೇ ಕರ್ನಾಟಕ ಗೃಹ ಮಂಡಳಿ ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಗೆ ವರ್ಗ ಮಾಡಲಾಗಿತ್ತು.