‘ಯಾರಪ್ಪಾ ಅಧಿಕಾರಿ... ಏಕೆ ಕೆಲಸ ಮಾಡ್ತಿಲ್ಲ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ (ಪ್ರ.ವಾ., ಜುಲೈ 23). ಸಚಿವರ ಕಳಕಳಿ ಶ್ಲಾಘನೀಯ. ಆದರೆ ಅಹವಾಲುದಾರರನ್ನು ಮತ್ತು ಅಧಿಕಾರಿಗಳನ್ನು ಏಕವಚನದಲ್ಲಿ ಸಂಬೋಧಿಸಿದ್ದು ಸರಿಯಲ್ಲ.
ಅದರ ಬದಲು ಬಹುವಚನ ಬಳಸಿದ್ದಿದ್ದರೆ ಸಚಿವರ ವ್ಯಕ್ತಿತ್ವಕ್ಕೆ ಮೆರುಗು ಬರುತ್ತಿತ್ತು. ಅಹವಾಲುದಾರರು ಹಾಗೂ ಅಧಿಕಾರಿಗಳಿಗೆ ಸಚಿವರ ಕುರಿತು ಇರುವ ಗೌರವ ದುಪ್ಪಟ್ಟಾಗುತ್ತಿತ್ತು. ಏಕವಚನ ಸಂಬೋಧನೆ ಕೇಳಲು ಹಿತಕರವಲ್ಲ. ಶೋಭೆಯೂ ಅಲ್ಲ.