ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನು, ಎಷ್ಟು ತಿಳಿದಿರಬೇಕು?

ಯಶಸ್ಸಿನತ್ತ...
Last Updated 22 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಪ್ರಥಮ ಬಾರಿಗೆ ಏಪ್ರಿಲ್ 11 ರಿಂದ 30ರವರೆಗೆ ಜಾತಿ ಗಣತಿ ಮಾಡಲಾಗುವುದು. ಈ ಗಣತಿಯು ಜಾತಿ ಆಧಾರಿತ  ಮೀಸಲಾತಿ ಹಾಗೂ ವಿವಿಧ ಜಾತಿಗಳ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ತಿಳಿಯಲು ಸಹಕಾರಿಯಾಗುತ್ತದೆ. ಈ ಹಿಂದೆ ಕ್ರಿ.ಶ. 1931ರಲ್ಲಿ ಕೂಡಾ ಈ ರೀತಿ ಜನಗಣತಿ ಮಾಡಲಾಗಿತ್ತು.

ಜನವರಿ 7ರಿಂದ 9ರವರೆಗೆ ಪ್ರವಾಸಿ ಭಾರತೀಯ ದಿವಸವನ್ನು ಗುಜರಾತಿನ ಅಹ್ಮದಾಬಾದ್‌ನಲ್ಲಿ ಆಚರಿಸಲಾಯಿತು.
ತಮಿಳನಾಡಿನ ಥೇನಿ ಜಿಲ್ಲೆಯ ಪೊಟ್ಟಪುರಂ ಬಳಿ ಬೋಡಿ ಪರ್ವತ ಶ್ರೇಣಿಯಲ್ಲಿ 1500 ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತೀಯ ಕಣ ವಿಶ್ಲೇಣಾಲಯ ಸ್ಥಾಪನೆ. (ಇಂಡಿಯನ್ ನ್ಯೂಟ್ರಿನೊ ಆಬ್ಸರ್ವೇಟರಿ- ಐಎನ್‌ಓ)

ನ್ಯುಟ್ರಿನೋಸ್: ಬೆಳಕಿಗಿಂತ ವೇಗವಾಗಿ ಚಲಿಸುವ ಹಾಗೂ ನಿಲುಕದ ಪರಮಾಣುವಿಗಿಂತ ಚಿಕ್ಕದಾದ  ಸೂಕ್ಷ್ಮತೀಸೂಕ್ಷ್ಮ ಕಣಗಳನ್ನು ನ್ಯೂಟ್ರಿನೋಸ್ ಎಂದು ಕರೆಯುತ್ತಾರೆ.

ಅಶ್ವಥ್‌ ಅಯ್ಯಪ್ಪ ಅವರ ‘ವೆನ್‌ ಗಾಡ್‌ ಬೌಲ್ಸ್‌ ಎ ಗೂಗ್ಲಿ‘ ಕೃತಿ ಬಿಡುಗಡೆ. ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಮೈತ್ರಿಪಾಲ ಸಿರಿಸೇನ (63) ಆಯ್ಕೆಯಾದರು. ಇವರು ಶ್ರೀಲಂಕಾದ 7ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.

ಶ್ರೀಲಂಕಾದಲ್ಲಿ ಆಡಳಿತ ನಡೆಸಿದ ರಾಷ್ಟ್ರಪತಿಗಳ ವಿವರ
1.  ವಿಲಿಯಂಮ್  ಗೊಪಾಲ್ಲವ 1972–78
2.  ಜುನಿಯಸ್ ರಿಚರ್ಡ ಜಯವರ್ಧನೆ 1978–1989
3. ರಣಸಿಂಗ್ ಪ್ರೇಮದಾಸ 1989–1993 (ಎಲ್‌ಟಿಟಿಇಯಿಂದ ಹತರಾದರು)
4.  ದಿಂಗಿರಿ ಬಂಡ ವಿಜೆಯತುಂಗ  1993–1994
5.  ಚಂದ್ರಿಕ ಕುಮಾರತುಂಗ  1994–2005
6.  ಮಹಿಂದಾ ರಾಜಪಕ್ಷೆ 2005–2015
7.  ಮೈತ್ರಿಪಾಲ ಸಿರಿಸೇನ  2015 ರಿಂದ ಈ ವರೆಗೆ

ದ್ವೈವಾರ್ಷಿಕವಾಗಿ ನಡೆಯುವ ವೈಬ್ರಂಟ್  ಗುಜರಾತ್ (ಉಜ್ವಲ ಗುಜರಾತ್)ನೇ ಶೃಂಗಸಭೆಗೆ ಮೋದಿ ಅವರಿಂದ ಚಾಲನೆ. ಈ ಶೃಂಗಸಭೆಗೆ ಮುಖ್ಯ ಗಣ್ಯರಾಗಿ ಅಮೆರಿಕಾದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಜಾನ್ ಕೆರಿ, ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್, ವಿಶ್ವಬ್ಯಾಂಕ್‌ ಅಧ್ಯಕ್ಷ ಜಿಮ್ ಯಾಂಗ್ ಕಿಮ್, ಮಸಡೋನಿಯಾ ಪ್ರಧಾನಿ ನಿಕೋಲ್ ಗ್ರುವಸ್ಕಿ ಸೇರಿದಂತೆ ಅನೇಕ ದಿಗ್ಗಜರು ಪಾಲ್ಗೊಂಡಿದ್ದರು.

2 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಈ ಸಮಾವೇಶದಲ್ಲಿ ಒಪ್ಪಂದಕ್ಕೆ ಬರಲಾಯಿತು.  ಸುಮಾರು 50 ಸಾವಿರ ಉದ್ಯೋಗ ಸೃಷ್ಟಿಯ ನಿರೀಕ್ಷೆ ಹಾಗೂ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ 31 ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಸ್ವಿಟ್ಜರ್‌ಲೆಂಡ್‌ನ  ರೋಜರ್ ಫೆಡರರ್ ಬ್ರಿಸ್ಪೇನ ಇಂಟರ್  ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಜಯಗಳಿಸುವುದರ ಮೂಲಕ ವೃತ್ತಿ ಜೀವನದಲ್ಲಿ ಸಾವಿರ ಪಂದ್ಯಗಳನ್ನು ಜಯಿಸಿದ ಮೂರನೇ  ಆಟಗಾರನೆಂಬ ಕೀರ್ತಿಗೆ ಪಾತ್ರರಾದರು. ಜಿಮ್ಮಿ ಕಾನರ್ಸ (1253) ಮತ್ತು ಇವಾನ್ ಲೆಂಪ್ಲ್ (1071) ಸಾವಿರಕ್ಕೂ ಅಧಿಕ ಪಂದ್ಯಗಳಲ್ಲಿ ಜಯಸಾಧಿಸಿದ ಇತರ ಆಟಗಾರರು.

ಇಸ್ರೊದ ನೂತನ ಅಧ್ಯಕ್ಷರಾಗಿ ಕನ್ನಡಿಗ ಆಲೂರು ಸಿಳಿನ್ ಕಿರಣಕುಮಾರ ಆಯ್ಕೆಯಾದರು. ಇವರು ಈ ವರೆಗೂ ಅಹ್ಮದಾಬಾದಿನ ಉಪಗ್ರಹ ಆನ್ವಯಿಕ ಕೇಂದ್ರ ನಿರ್ದೇಶಕರಾಗಿದ್ದರು. 1975 ರಿಂದಲೂ  ಇಸ್ರೋದೊಂದಿಗೆ ಒಡನಾಟ ಹೊಂದಿರುವ ಇವರು ಮಹತ್ವಾಕಾಂಕ್ಷೆಯ ಯೋಜನೆಗಳಾದ ಭಾಸ್ಕರ (1979), ಚಂದ್ರಯಾನ 1 (2008)ರಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಬಾಂಗ್ಲಾ ದೇಶದಲ್ಲಿ ಮೊದಲ ಬಾರಿಗೆ ಮುಖ್ಯ ನ್ಯಾಯಮೂರ್ತಿಗಳಗಿ ಹಿಂದೂಗಳೊಬ್ಬರು ನೇಮಕವಾಗಿದ್ದಾರೆ. ನ್ಯಾಯಮೂರ್ತಿ ಎಸ್.ಕೆ.ಸಿನ್ಹಾ ಅವರು ಈ ಹುದ್ದೆಗೆ ಆಯ್ಕೆಯಾದ ಭಾರತೀಯ ಮೂಲದವರು. ಭಾರತ ಮತ್ತು ಬಾಂಗ್ಲಾದೇಶದ  ಗಡಿಯಲ್ಲಿ ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸುವ  ಬಾರ್ಡರ್ ಹಾತ್ ಕಾರ್ಯಕ್ರಮಕ್ಕೆ  ತ್ರಿಪುರಾದಲ್ಲಿ ಚಾಲನೆ.  ಖ್ಯಾತ ಹಿಂದಿ ಸಾಹಿತಿ ಕಮಲ್ ಕಿಶೋರ್ ಗೋಯಂಕಾ ಅವರಿಗೆ ಪ್ರತಿಷ್ಠಿತ ವ್ಯಾಸ್ ಸಮ್ಮಾನ್ -2014ರ ಪ್ರಶಸ್ತಿ ಪ್ರದಾನ.

ವ್ಯಾಸ್ ಸಮ್ಮಾನ್ ಪ್ರಶಸ್ತಿ ಹಿಂದಿ ಸಾಹಿತ್ಯ  ಕೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ  ನೀಡಲಾಗುತ್ತದೆ. ಪ್ರಶಸ್ತಿಯು 2.5 ಲಕ್ಷ ರೂ ನಗದು ಪುರಸ್ಕಾರವನ್ನು ಒಳಗೊಂಡಿದೆ. ಈ ಪ್ರಶಸ್ತಿಯನ್ನು 1991 ರಲ್ಲಿ ಮೊದಲ ಬಾರಿಗೆ ಕೆ.ಕೆ ಬಿರ್ಲಾ ಫೌಂಡೇಶನ್ ವತಿಯಿಂದ ಪ್ರಾರಂಭಿಸಲಾಯಿತು. ಈ ಪ್ರಶಸ್ತಿಗೆ ಹಿಂದಿ ಸಾಹಿತ್ಯಕ್ಕೆ ಕಳೆದ ಹತ್ತು ವರ್ಷಗಳಿಂದ ಗಣನೀಯ ಸೇವೆ ಸಲ್ಲಿಸಿದವರನ್ನು ಆಯ್ಕೆ ಮಾಡಲಾಗುತ್ತದೆ.

ಈ ವರ್ಷದ ಪ್ರಶಸ್ತಿಯು ‘ಪ್ರೇಮಚಂದ ಕೆ. ಕಹಾನಿಯೊಂಕಾ ಕಾಲ ಕ್ರಮಾನುಸಾರ ಅಧ್ಯಯನ’ ಎಂಬ ಕೃತಿಗೆ  ನೀಡಲಾಗಿದೆ.
ಬಡತನ ರೇಖೆಗಿಂತ  ಮೇಲಿನ ಎ.ಪಿ.ಎಲ್ ಕಾರ್ಡ್‌ ಕುಟುಂಬಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಒದಗಿಸುವ ‘ರಾಜೀವ್ ಆರೋಗ್ಯ ಭಾಗ್ಯ’ ಮತ್ತು ಸರಕಾರಿ ನೌಕರರಿಗೆ  ನಗದು ರಹಿತ ಚಿಕಿತ್ಸೆ ನೀಡುವ ‘ಜ್ಯೋತಿ ಸಂಜೀವಿನಿ’ ಯೋಜನೆಗಳಿಗೆ ಚಾಲನೆ ನೀಡಲಾಗಿದೆ.

ಸ್ವದೇಶಿ ವಿನ್ಯಾಸದೊಂದಿಗೆ  ಅಭಿವೃದ್ಧಿಗೊಂಡಿರುವ ಮೊದಲು ಹಗುರ ಯುದ್ಧ ವಿಮಾನ ತೇಜಸ್‌ ಅನ್ನು ವಾಯುಪಡೆಗೆ ಹಸ್ತಾಂತರ ಮಾಡಲಾಯಿತು. ತೇಜಸ್ ಹಗುರ ಯುದ್ಧ  ವಿಮಾನ ತಯಾರಿಕಾ ಪ್ರಣಾಳಿಕೆಗೆ 1983ರಲ್ಲಿ ಚಾಲನೆ ದೊರೆಯಿತು. ತೇಜಸ್  ಯುದ್ಧ ವಿಮಾನವು ಆಕಾಶದಿಂದ  ಭೂಮಿ ಮತ್ತು ಆಕಾಶದಿಂದ ಸಮುದ್ರದೆಡೆಗೆ ಮುನ್ನಗ್ಗಬಲ್ಲ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ರಷ್ಯಾ ನಿರ್ಮಿತ ಮಿಗ್‌ಬಿ ಜೆಟ್‌ಗೆ ಪರ್ಯಾಯವಾಗಿ ಬಳಸಲು ಉದ್ದೇಶಿಸಲಾಗಿದೆ.

ಸ್ಪೇನ್ ಲೇಖಕ ಜೇವಿಯರ್ ಮೋರೊ ಬರೆದ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಜೀವನ ಆಧಾರಿತ ‘ರೆಡ್ ಸ್ಯಾರಿ: ಎ ಡ್ರಾಮಾಟೈಸ್ಡ್ ಬಯೋಗ್ರಫಿ ಆಫ್ ಸೋನಿಯಾ ಗಾಂಧಿ’ ಭಾರತದಲ್ಲಿ ಬಿಡುಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT